ಕರ್ನಾಟಕ

karnataka

ETV Bharat / state

ಸುಮಲತಾ ಗೆಲುವಿಗಾಗಿ 6 ಕಿ.ಮೀ ಉರಳು ಸೇವೆ :  ಅಂಬಿ ಅಭಿಮಾನಿ ಕೋರಿಕೆ ಈಡೇರುವುದೇ..?

ಅಂಬರೀಶ್ ಅಪ್ಪಟ ಅಭಿಮಾನಿಯಿಂದ ಸುಮಲತಾ ಗೆಲುವಿಗಾಗಿ ಉರುಳು ಸೇವೆ. 6 ಕಿ.ಮೀ ಉರುಳು ಸೇವೆ ಮಾಡುತ್ತಿರುವ ಕೆ.ಆರ್ ನಗರದ ಯುವಕ ಬೆನಕ ಪ್ರಸಾದ್.

By

Published : Mar 30, 2019, 12:39 PM IST

ಅಂಬಿ ಅಭಿಮಾನಿ

ಮೈಸೂರು: ಅಂಬರೀಶ್ ಅಭಿಮಾನಿಯೊಬ್ಬ 6 ಕಿ.ಮೀ ಉರುಳು ಸೇವೆ ಮಾಡಿ ಸುಮಲತಾ ಗೆಲುವಿಗಾಗಿ ಪ್ರಾರ್ಥಿಸಿದ್ದಾ‌ನೆ.

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಜಿಲ್ಲೆಯ ಕೆ.ಆರ್ ನಗರ ಪಟ್ಟಣದ ಬೆನಕ ಪ್ರಸಾದ್ ಎಂಬ ಯುವಕ ಅಂಬರೀಶ್ ಅಪ್ಪಟ ಅಭಿಮಾನಿ. ವೃತ್ತಿಯಲ್ಲಿ ಡ್ರೈವರ್ ಆಗಿರುವ ಈತ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿಸುತ್ತಿದ್ದಾನೆ. ಇದಕ್ಕಾಗಿಯೇ ಈತ ಕೆ.ಆರ್. ನಗರ ಪಟ್ಟಣದ ಆಂಜನೇಯ ಬ್ಲಾಕ್ ನಲ್ಲಿರುವ ಆಂಜನೇಯಸ್ವಾಮಿ ದೇವಾಲಯದಿಂದ ಇಂದು ಬೆಳಗಿನ ಜಾವ 2 ಗಂಟೆಗೆ ಉರುಳು ಸೇವೆ ಆರಂಭಿಸಿದ್ದಾನೆ. ಈ ದೇವಾಲಯದಿಂದ 6 ಕಿಮೀ ದೂರವಿರುವ ಹಳೆಯ ಎಡತೊರೆ ಆಂಜನೇಯ ಸ್ವಾಮಿ ದೇವಾಲಯದವರೆಗೆ ಉರಳು ಸೇವೆಯನ್ನು ಮಾಡುತ್ತಿದ್ದಾನೆ.

ಸುಮಲತಾ ಗೆಲುವಿಗಾಗಿ 6 ಕಿ.ಮೀ ಉರಳು ಸೇವೆ ಆರಂಭಿಸಿದ ಅಂಬಿ ಅಭಿಮಾನಿ

ಯುವಕನ ಉರಳು ಸೇವೆ ಸಂಜೆ 4 ಗಂಟೆ ಹೊತ್ತಿಗೆ ಪೂರ್ಣಗೊಳ್ಳುಲಿದೆ. ನಂತರ ಎಡತೊರೆಯ ಪಕ್ಕದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಸುಮಲತಾ ಗೆಲುವಿಗಾಗಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾನೆ ಎಂದು ಹೇಳಲಾಗಿದೆ.

ABOUT THE AUTHOR

...view details