ಕರ್ನಾಟಕ

karnataka

ETV Bharat / state

ಲಂಕಾ ಬಾಂಬ್ ಸ್ಫೋಟ ಪ್ರಕರಣ, ಮೈಸೂರಿನ 14 ಜನ ಬಚಾವ್!

ದ್ವೀಪ ದೇಶಕ್ಕೆ ಪ್ರವಾಸಕ್ಕೆ ತೆರಳಿದ ಮೈಸೂರಿನ 14 ಮಂದಿ ಸುರಕ್ಷಿತವಾಗಿದ್ದು, ಈ ಕುರಿತಾದ ಫೋಟೊ ಹಂಚಿಕೊಂಡಿದ್ದಾರೆ.

By

Published : Apr 23, 2019, 7:48 PM IST

ಶ್ರೀಲಂಕಾಕ್ಕೆ ಪ್ರವಾಸಕ್ಕೆಂದು ತೆರಳಿದ ಮೈಸೂರಿನ 14 ಜನರು ಸುರಕ್ಷಿತವಾಗಿದ್ದಾರೆ

ಮೈಸೂರು: ಶ್ರೀಲಂಕಾಗೆ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ 14 ಜನರು ಸುರಕ್ಷಿತವಾಗಿದ್ದು, ಈ ಕುರಿತಾದ ಫೋಟೊವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ನಗರದ ಖಾಸಗಿ ಟ್ರಾವೆಲ್ಸ್‌ ಮೂಲಕ 6 ದಿನಗಳ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಬಿಜೆಪಿ ಸ್ಥಳೀಯ ಮುಖಂಡ ಎಂ.ವಿ. ರವಿಶಂಕರ್ ನೇತೃತ್ವದ 14 ಜನರ ತಂಡ, ಬಾಂಬ್ ಸ್ಫೋಟ ಸಂಭವಿಸಿದ ಸ್ಥಳದಿಂದ 40 ಕಿಲೋಮೀಟರ್ ದೂರದಲ್ಲಿದ್ದು ಸುರಕ್ಷಿತವಾಗಿರುವುದಾಗಿ ಕುಟುಂಬಸ್ಥರಿಗೆ ಶುಭಸುದ್ದಿ ರವಾನಿಸಿದ್ದಾರೆ.

ಜೊತೆಗೆ, 24ನೇ ತಾರೀಖಿನಂದು ಮೈಸೂರಿಗೆ ಬರುವುದಾಗಿ ತಿಳಿಸಿದ್ದು, ಘಟನೆಯಿಂದ ಆಘಾತಗೊಂಡಿದ್ದ ಸಂಬಂಧಿಕರು ನಿಟ್ಟುಸಿರು ಬಿಡುವಂತಾಗಿದೆ.

ABOUT THE AUTHOR

...view details