ಕರ್ನಾಟಕ

karnataka

ETV Bharat / state

ಸಮಸ್ಯೆಗಳ ಸುಳಿಯಲ್ಲಿ ಹಳೆಹೆಗ್ಗುಡಿಲು... ಆಶ್ವಾಸನೆಗೆ ಸೀಮಿತವಾದ ಅಧಿಕಾರಿಗಳು

ಆರೇಳು ತಿಂಗಳಿಂದ ಚರಂಡಿಯಲ್ಲಿ ನಿಂತ ನೀರು ಕೊಳೆತು ಗಬ್ಬು ನಾರುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯತ್​ನ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.  ಮುಳ್ಳೂರು ಗ್ರಾಮ ಪಂಚಾಯತ್​ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ.

By

Published : Mar 25, 2019, 10:51 PM IST

ಹಳೇಹೆಗ್ಗುಡಿಲು

ಮೈಸೂರು: ಸರಗೂರು ತಾಲೂಕಿನ ಸಮೀಪದಲ್ಲೇ ಇರುವ ಹಳೆಹೆಗ್ಗುಡಿಲು ಗ್ರಾಮದ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮದ ನೈರ್ಮಲ್ಯ ಹದಗೆಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಆರೇಳು ತಿಂಗಳಿಂದ ಚರಂಡಿಯಲ್ಲಿ ನಿಂತ ನೀರು ಕೊಳೆತು ಗಬ್ಬು ನಾರುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯತ್​ನ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಮುಳ್ಳೂರು ಗ್ರಾಮ ಪಂಚಾಯತ್​ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿವೆ.

ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದಿದ್ದ ಜಿಲ್ಲಾ ಪಂಚಾಯತ್​ನ ಸದಸ್ಯರು ಈವರೆಗೂ ಗ್ರಾಮಕ್ಕೆ ಕಾಲಿಟ್ಟಿಲ್ಲ. ಒಂದು ಕಡೆ ಗ್ರಾಮದ ಶಿಥಿಲಗೊಂಡ ಶಾಲೆ ಬೀಳುವ ಹಂತ ತಲುಪುತ್ತಿದ್ದು, ಮತ್ತೊಂದೆಡೆ ನೀರಿನ ಟ್ಯಾಂಕ್​ ಕೂಡ ಆಗೋ ಈಗೋ ಬೀಳುತ್ತೇನೆ ಎಂದು ಜನರನ್ನು ಬೆಚ್ಚಿಸುವಂತಿದೆ. ಈ ಎಲ್ಲಾ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಆಶ್ವಾಸನೆ ನೀಡುತ್ತಾರೆಯೇ ಹೊರತು ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ABOUT THE AUTHOR

...view details