ಕರ್ನಾಟಕ

karnataka

ಏನಯ್ಯಾ,ನಿನ್ನ ಕ್ಷೇತ್ರದಲ್ಲೇ ಮೈತ್ರಿ ಅಭ್ಯರ್ಥಿಗೆ ಹಿನ್ನೆಡೆಯಾಗಿದೆ: ಪುಟ್ಟರಂಗಶೆಟ್ಟಿಗೆ ಸಿದ್ದು ಕ್ಲಾಸ್​

By

Published : May 28, 2019, 2:04 PM IST

ಮೃಗಾಲಯದ ಮುಂಭಾಗದಲ್ಲಿರುವ ಹೋಟೆಲ್‌ಗೆ ಹೋದರಾದರೂ, ಕಾರಿನಲ್ಲೇ ಕುಳಿತು ತಿಂಡಿ ಸವಿದರು.

ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಯೋಗಕ್ಷೇಮ ವಿಚಾರಿಸಲು ಬಂದ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ನಿನ್ನೆಯಿಂದ ಮೈಸೂರಿನಲ್ಲೇ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ ಇಂದು ಬೆಂಗಳೂರಿಗೆ ಹೊರಡುವ ವೇಳೆ, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಸಿದ್ದು ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ, ಏನಯ್ಯಾ ನಿನ್ನ ಕ್ಷೇತ್ರದಲ್ಲೇ ಮೈತ್ರಿ ಅಭ್ಯರ್ಥಿಗೆ ಹಿನ್ನಡೆಯಾಗಿದೆ ಎಂದು ಕೇಳಿದ್ದಾರೆ.

ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ

ಆ ನಂತರ ಸಿದ್ದರಾಮಯ್ಯ ಮೃಗಾಲಯದ ಮುಂಭಾಗದಲ್ಲಿರುವ ರಿಫ್ರೆಶ್‌ಮೆಂಟ್ ಹೊಟೇಲ್​ಗೆ ಹೋಗಿ ಕಾರಿನಲ್ಲೇ ಕುಳಿತು ತಿಂಡಿ ಸವಿದರು. ಅಲ್ಲಿಗೆ ಬಂದ ಅಭಿಮಾನಿಗಳೊಂದಿಗೆ ಮಾತುಕತೆ ಕೂಡ ನಡೆಸಿದರು. ತದನಂತರ ಅವರು ವಿಮಾನದಲ್ಲಿ ಬೆಂಗಳೂರಿಗೆ ಹೊರಟರು.

ಪ್ರಧಾನಿ ನರೇಂದ್ರ ಮೋದಿಯವರ ಇದೇ 30ನೇ ತಾರೀಖಿನಂದು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಿಎಂ ಕುಮಾರಸ್ವಾಮಿಗೆ ಆಹ್ವಾನ ನೀಡಿಲ್ಲ ಎಂಬ ಬಗ್ಗೆ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ABOUT THE AUTHOR

...view details