ಕರ್ನಾಟಕ

karnataka

By

Published : Apr 3, 2020, 11:58 PM IST

ETV Bharat / state

ಹಾಸನ, ಮೈಸೂರು ಜಿಲ್ಲೆಯ ಕೆಲವೆಡೆ ಲಘು ಭೂಕಂಪ

ಹಾಸನ, ಮೈಸೂರು ಜಿಲ್ಲೆಯ ಸುತ್ತ ಭೂ ಕಂಪನ ಸಂಭವಿಸಿದ್ದು, 2.9ರಷ್ಟು ತೀವ್ರತೆ ದಾಖಲಾಗಿದೆ.

Breaking News

ಮೈಸೂರು:ಶುಕ್ರವಾರ ಸಂಜೆ 5 ಗಂಟೆ 18 ನಿಮಿಷಕ್ಕೆ ಸಂಭವಿಸಿದ ಭೂ ಕಂಪನದ ತೀವ್ರತೆ 2.9ರಷ್ಟಿತ್ತು ಎಂದು ಕೆ.ಆರ್. ನಗರ ತಾಲೂಕಿನ ತಹಶೀಲ್ದಾರ್ ಮಂಜುಳಾ ಹೇಳಿದ್ದಾರೆ.

ಹಾಸನ, ಮೈಸೂರು ಜಿಲ್ಲೆಗಳ ಸುತ್ತ ಭೂ ಕಂಪನ

ಹಾಸನ ಜಿಲ್ಲೆಯ ಅರಕಲಗೂಡು, ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೂ ಕಂಪನ ಜನರಲ್ಲಿ ಆತಂಕ ಮೂಡಿಸಿದೆ. ಕರ್ನಾಟಕ ರಾಜ್ಯ ನ್ಯಾಷನಲ್ ಡಿಸಾಸ್ಟರ್​ ಸೆಂಟರ್​ನಿಂದ ಬಂದಿರುವ ಮಾಹಿತಿಯಲ್ಲಿ ಭೂ ಕಂಪನದ ತೀವ್ರತೆಯನ್ನ ತಿಳಿಸಲಾಗಿದೆ. ಅರಕಲಗೂಡು ಮತ್ತು ಕೆ.ಆರ್. ನಗರದ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಭೂಕಂಪ ಸಂಭವಿಸಿದೆ.

ಇದು ಪ್ರಕೃತಿ ವಿಕೋಪದ ಮೇಲ್ವಿಚಾರಣಾ ಕೇಂದ್ರದಿಂದ ಬಂದಿರುವ ಮಾಹಿತಿಯಾಗಿದೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ 30 ವರ್ಷಗಳ ಹಿಂದೆ ಈ ರೀತಿ ಅನುಭವಾಗಿತ್ತು. ಈ ಕಂಪನ ಅಷ್ಟೊಂದು ತೀವ್ರತೆ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ABOUT THE AUTHOR

...view details