ಕರ್ನಾಟಕ

karnataka

By

Published : Oct 24, 2020, 3:37 PM IST

ETV Bharat / state

ಬೈಕ್ - ಜಿಂಕೆ ನಡುವೆ ಅಪಘಾತ: ಸ್ಥಳದಲ್ಲೇ ಜಿಂಕೆ ಸಾವು, ಸವಾರನಿಗೆ ಗಂಭೀರ ಗಾಯ

ನಾಗರಹೊಳೆ ರಸ್ತೆಯ ನಾಗಾಪುರ ಬಳಿ ಬೈಕ್ ಗೆ ಜಿಂಕೆಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಜಿಂಕೆ ಸಾವನ್ನಪ್ಪಿದ್ದು, ಸವಾರ ಗಾಯಗೊಂಡ ಘಟನೆ ನಡೆದಿದೆ.

Accident
Accident

ಮೈಸೂರು: ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸವಾರ ಗಾಯ ಗೊಂಡಿರುವಾಗಿರುವ ಘಟನೆ ನಾಗರಹೊಳೆ ರಸ್ತೆಯ ನಾಗಾಪುರ ಬಳಿ ನಡೆದಿದೆ.

ಸಂತೋಷ್ ಅಪಘಾತದಲ್ಲಿ ಗಾಯವಾದ ವ್ಯಕ್ತಿ. ಈತ ಹುಣಸೂರು ನಗರದ ಕಲ್ಕುಣಿಕೆ ಗ್ರಾಮದ ನಿವಾಸಿಯಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ನಾಗಾಪುರ ಬಳಿಯ ಉಡ್ ಲಾಟ್ ಕಡೆಯಿಂದ ಜಿಂಕೆಯೊಂದು ಓಡಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಕೆಳಗೆ ಬಿದಿದ್ದು, ತಲೆಗೆ ಗಂಭೀರ ಗಾಯವಾಗಿದೆ.

ಇನ್ನು ಗಾಯಗೊಂಡ ಸಂತೋಷ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details