ಕರ್ನಾಟಕ

karnataka

ETV Bharat / state

ಎರಡೂ ಪಕ್ಷದ ನಾಯಕರ ಬೆಂಬಲದಿಂದ ಗೆಲ್ಲುವೆ- ಮೈತ್ರಿ ಅಭ್ಯರ್ಥಿ ವಿಜಯಶಂಕರ್‌ ವಿಶ್ವಾಸ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮನ್ವಯ ಕೊರತೆಯಿಂದ ನಿನ್ನೆ ಕರೆದ ಪತ್ರಿಕಾಗೋಷ್ಠಿ ರದ್ದಾಗಲಿಲ್ಲ. ಅಭ್ಯರ್ಥಿ ಯಾರು ಎಂದು ಅಧಿಕೃತವಾಗಿ ಘೋಷಣೆಯಾಗದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು.

By

Published : Mar 24, 2019, 6:32 PM IST

ವಿಜಯಶಂಕರ್

ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿರುವುದಕ್ಕೆ ಅಭ್ಯರ್ಥಿ ಸಿ‌.ಎಚ್‌.ವಿಜಯಶಂಕರ್ ಖುಷಿಯಾಗಿದ್ದು ಮಾಧ್ಯಮಗಳಿಗೆ ಹಾಗೂ ಪಕ್ಷದ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮನ್ವಯ ಕೊರತೆಯಿಂದ ನಿನ್ನೆ ಕರೆದ ಪತ್ರಿಕಾಗೋಷ್ಠಿ ರದ್ದಾಗಲಿಲ್ಲ. ಅಭ್ಯರ್ಥಿ ಯಾರು ಎಂದು ಅಧಿಕೃತವಾಗಿ ಘೋಷಣೆಯಾಗದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು.

ಲೋಕಸಭಾ ಟಿಕೆಟ್​ ಸಿಕ್ಕಿರುವುದಕ್ಕೆ ಖುಷಿಯಾಗಿರುವ ವಿಜಯ್​​ಶಂಕರ್​​ ಮಾಧ್ಯಮಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ

ಕಾಂಗ್ರೆಸ್ ಪಕ್ಷದ ವರಿಷ್ಠರು ನನ್ನ ಹೆಸರು ಅಂತಿಮಗೊಳಿಸಿರುವುದರಿಂದ ನಾಳೆ ಎರಡು ಪಕ್ಷದ ಮುಖಂಡರು ನಾಮಪತ್ರ ಸಲ್ಲಿಕೆ ವೇಳೆಗೆ ಆಗಮಿಸಲಿದ್ದಾರೆ ಎಂದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಣತಂತ್ರ ರೂಪಿಸಲು ಸಭೆ ನಡೆಯಲಿದೆ ಎಂದು ತಿಳಿಸಿದರು.

ABOUT THE AUTHOR

...view details