ಮೈಸೂರು: ಕೋವಿಡ್-19 ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಜಾಗೃತಿ ಮೂಡಿಸುತ್ತೇವೆ. ಅದರೊಟ್ಟಿಗೆ ಸಂಘ ಸಂಸ್ಥೆಗಳು, ಎನ್ ಜಿಒ, ಕಲಾವಿದರು ಹಾಗೂ ಕುಂಚ ಕಲಾವಿದರ ಕೂಡ ಸಮಾಜದ ಮೇಲೆ ಕಾಳಜಿ ತೋರಿ ಜಾಗೃತಿಗೆ ಸಾಥ್ ನೀಡುತ್ತಿದ್ದಾರೆ.
'ಕೊರೊನಾ ತೊಲಗಿಸಿ, ಭಾರತ ರಕ್ಷಿಸಿ' ಕುಂಚ ಕಲಾವಿದರ ಜಾಗೃತಿ
ಸಾಂಸ್ಕೃತಿಕ ನಗರಿಯ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದೇವರಾಜ ಅರಸು ರಸ್ತೆಗೆ ಹೋಗುವ ರಸ್ತೆಯಲ್ಲಿ ಕೊರೊನಾ ವೈರಸ್ ಹರಡದಂತೆ ಎಲ್ಲರೂ ಜಾಗೃತಿ ವಹಿಸಬೇಕಿದೆ ಎಂದು ಕುಂಚದ ಮೂಲಕ ಜಾಗೃತಿ ಮೂಡಿಸಿದೆ.
'ಕೊರೊನಾ ತೊಲಗಿಸಿ, ಭಾರತ ರಕ್ಷಿಸಿ' ಕುಂಚ ಕಲಾವಿದರ ಜಾಗೃತಿ
ಮೈಸೂರು ಜಿಲ್ಲಾ ಕುಂಚ ಕಲಾವಿದರ ಸಂಘವು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದೇವರಾಜ ಅರಸು ರಸ್ತೆಗೆ ಹೋಗುವ ರಸ್ತೆಯಲ್ಲಿ ಕೊರೊನಾ ವೈರಸ್ ಹರಡದಂತೆ ಎಲ್ಲರೂ ಜಾಗೃತಿ ವಹಿಸಬೇಕಿದೆ ಎಂದು ಕುಂಚದ ಮೂಲಕ ಜಾಗೃತಿ ಮೂಡಿಸಿದೆ.
'ಕೊರೊನಾ ತೊಲಗಿಸಿ, ಭಾರತ ರಕ್ಷಿಸಿ' 'ಜೀವ ಇದ್ರೆ ಆಸ್ತಿ, ಜೀವನ ಎಚ್ಚರ', 'ನಿಮ್ಮ ಆರೋಗ್ಯ ದೇಶ ಭವಿಷ್ಯ', ಈ ವಾಕ್ಯಗಳ ಮೂಲಕ ಜಾಗೃತಿ ಮೂಡಿಸಿದೆ. ಆದರೆ ಮೈಸೂರಿನಲ್ಲಿ 19 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದರು. ಸಾರ್ವಜನಿಕರು ಕಾಳಜಿ ತೋರದೇ ಬೀದಿ ಸುತ್ತುವುದು ಕಡಿಮೆಯಾಗಿಲ್ಲ.