ಕರ್ನಾಟಕ

karnataka

By

Published : Feb 9, 2019, 5:37 PM IST

ETV Bharat / state

ರೌಡಿ ಕೈ ಮೇಲೆ ಉಗ್ರಂ ಟ್ಯಾಟೂ ನೋಡಿ ಮಂಡ್ಯ ಎಸ್‌ಪಿ ಗರಂ

ಮಂಡ್ಯದಲ್ಲಿ ಪೊಲೀಸ್ ರೌಡಿಗಳ ಪರೇಡ್ ವೇಳೆ ಟ್ಯಾಟೂ ಹಾಕಿಸಿಕೊಂಡಿದ್ದವರ ಮೇಲೆ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಸಖತ್ ಕ್ಲಾಸ್ ತೆಗೆದುಕೊಂಡರು.

ಪರೇಡ್

ಮಂಡ್ಯ: ರೌಡಿ ಕೈ ಮೇಲೆ ಉಗ್ರಂ ಟ್ಯಾಟೂ ನೋಡಿದ ಮಂಡ್ಯ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಉಗ್ರಗೊಂಡು ರೌಡಿಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಜಿಲ್ಲಾ ಡಿಎಆರ್ ಮೈದಾನದಲ್ಲಿ ರೌಡಿಗಳ ಪರೇಡ್ ಮಾಡಿದ ಪೊಲೀಸ್ ಅಧಿಕಾರಿಗಳು, ಎಲ್ಲರಿಗೂ ಎಚ್ಚರಿಕೆ ನೀಡಿದರು‌.

ಉಗ್ರಂ ಟ್ಯಾಟೂ

ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ರೌಡಿಗಳನ್ನು ಕರೆಸಿ ವಿಚಾರಣೆ ಮಾಡಲಾಯಿತು. ಪ್ರತಿಯೊಬ್ಬರನ್ನೂ ವಿಚಾರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಮಂಡ್ಯ ವಿಭಾಗದ ರೌಡಿ ತನ್ನ ಕೈ ಮೇಲೆ ಉಗ್ರಂ ಟ್ಯಾಟೂ ಹಾಕಿಸಿಕೊಂಡಿರುವುದನ್ನು ಗಮನಿಸಿದ ಎಸ್‌ಪಿ ಕ್ಲಾಸ್ ತೆಗೆದುಕೊಂಡರು.

ಉಗ್ರಂ ಟ್ಯಾಟೂ

ಆತನಿಗೆ ಒಂದು ವಾರದೊಳಗೆ ಟ್ಯಾಟೂ ತೆಗೆಯುವಂತೆ ಎಸ್‌ಪಿ ಎಚ್ಚರಿಕೆ ನೀಡಿದರು. ಇದಕ್ಕೆ ರೌಡಿ ಒಂದು ವಾರಗಳ ಗಡುವು ಪಡೆದಿದ್ದು, ತೋರಿಸುವುದಾಗಿ ತಿಳಿಸಿದ್ದಾನೆ. ನಂತರ ಇತರ ವಿಭಾಗಗಳ ರೌಡಿಗಳಿಗೆ ಎಚ್ಚರಿಕೆ ನೀಡಲಾಯಿತು. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿ ಚಟುವಟಿಕೆಯಿಂದ ದೂರ ಇರಬೇಕು. ಇಲ್ಲವೇ ಜಿಲ್ಲೆಯಿಂದ ಗಡಿಪಾರು ಮಾಡುವ ಎಚ್ಚರಿಕೆ ನೀಡಿದರು‌.

ABOUT THE AUTHOR

...view details