ಕರ್ನಾಟಕ

karnataka

By

Published : Dec 28, 2020, 12:46 PM IST

ETV Bharat / state

ಬಿಜೆಪಿ ಜತೆ ಜೆಡಿಎಸ್ ವಿಲೀನವಾಗುವ ವಿಚಾರವೇ ಪ್ರಸ್ತಾಪವಾಗಿಲ್ಲ : ಶಾಸಕ ರವೀಂದ್ರ ಶ್ರೀಕಂಠಯ್ಯ

ಮುಂದಿನ ದಿನಗಳಲ್ಲಿ ಆ ಸಂದರ್ಭಗಳು ಬರಬಹುದು, ಇಲ್ಲ ಅಂತಾ ನಾನು ಹೇಳುವುದಕ್ಕೆ ಆಗಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೆ ನೋಡೋಣ..

mla srikantaiah
ಶಾಸಕ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಹೇಳಿಕೆ

ಮಂಡ್ಯ :ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗುವ ವಿಚಾರ ಖಂಡಿತ ಪ್ರಸ್ತಾಪವಾಗಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ವಿಲೀನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮೈತ್ರಿ ಕುರಿತಂತೆ ಜೆಡಿಎಸ್ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯೆ..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಲೀನದ ಬಗ್ಗೆ ಏನಾದರೂ ಚರ್ಚೆಯಾದರೆ ವಿಷಯಾಧಾರಿತ ಬೆಂಬಲವಿದೆ. ಈಗಾಗಲೇ ಎರಡು ವಿಚಾರಕ್ಕೆ ಬಿಜೆಪಿಗೆ ಸಪೋರ್ಟ್ ಮಾಡಿದ್ದೇವೆ. ಸಾರ್ವಜನಿಕರು, ಬಡವರು, ರೈತರ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಮಾತ್ರ ಸಹಕರಿಸುವುದು ಅಂತಾ ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ರು.ಮುಂದಿನ ದಿನಗಳಲ್ಲಿ ಮೈತ್ರಿ ವಿಚಾರ ಪಕ್ಷದ ವರಿಷ್ಠರಿಗೆ ಸೇರಿದ್ದು, ಈ ಕುರಿತು ಯಾವುದೇ ಸಭೆಗಳು ಇನ್ನೂ ಆಗಿಲ್ಲ.

ಮುಂದಿನ ದಿನಗಳಲ್ಲಿ ಆ ಸಂದರ್ಭಗಳು ಬರಬಹುದು, ಇಲ್ಲ ಅಂತಾ ನಾನು ಹೇಳುವುದಕ್ಕೆ ಆಗಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೆ ನೋಡೋಣ ಅಂತಾ ಎಂದು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಚಾರದ ಕುರಿತು ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:ಅಧಿವೇಶನ ನಡೆದರೆ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಅಗತ್ಯವಿಲ್ಲ: ಸಚಿವ ಮಾಧುಸ್ವಾಮಿ

For All Latest Updates

TAGGED:

ABOUT THE AUTHOR

...view details