ಕರ್ನಾಟಕ

karnataka

By

Published : Jan 26, 2021, 6:44 PM IST

ETV Bharat / state

ರೈತರಿಗೆ ನಮ್ಮ ಸರ್ಕಾರಗಳು ಅನ್ಯಾಯ ಮಾಡಲ್ಲ.. ಸಚಿವ ನಾರಾಯಣಗೌಡ

ಪ್ರಧಾನಿ ಮೋದಿ ರೈತರ ಮಗ, ನಮ್ಮ ಕರ್ನಾಟಕ ಸಿಎಂ ಯಡಿಯೂರಪ್ಪ ಸಹ ರೈತರೇ.. ಹೀಗಾಗಿ, ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ..

minister narayanagowda reation about farmers protest
ಸಚಿವ ನಾರಾಯಣಗೌಡ ಹೇಳಿಕೆ

ಮಂಡ್ಯ :ರೈತರ ಪರ ನಾವು ಇದ್ದೇವೆ, ನಾವೆಲ್ಲಾ ರೈತರೇ.. ಈ ದಿನ ಏನು ಅನ್ನುವುದನ್ನ ರೈತರು ಅರ್ಥ ಮಾಡಿಕೊಳ್ಳಬೇಕು. ಯಾವ ದಿನ ಪ್ರತಿಭಟನೆ ಮಾಡಬೇಕು ಅನ್ನುವುದನ್ನ ತಿಳಿದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಅಂತಾ ಸಚಿವ ನಾರಾಯಣಗೌಡ ಹೇಳಿದ್ರು.

ದೆಹಲಿ ರೈತರ ಟ್ರ್ಯಾಕ್ಟರ್‌ ರ್ಯಾಲಿ ಕುರಿತಂತೆ ಸಚಿವ ನಾರಾಯಣಗೌಡ ಪ್ರತಿಕ್ರಿಯೆ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಯಾವ ತರಹದಲ್ಲೂ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಅನ್ಯಾಯ ಮಾಡಲು ಸಾಧ್ಯವಿಲ್ಲ.

ಪ್ರಧಾನಿ ಮೋದಿ ರೈತರ ಮಗ, ನಮ್ಮ ಕರ್ನಾಟಕ ಸಿಎಂ ಯಡಿಯೂರಪ್ಪ ಸಹ ರೈತರೇ.. ಹೀಗಾಗಿ, ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.

ಖಾತೆ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವರು, ಸಿಎಂ ನಮಗೆ ಒಳ್ಳೆಯ ಖಾತೆ ನೀಡಿದ್ದಾರೆ. ನಮ್ಮ ಕರ್ನಾಟಕದಲ್ಲಿ ಯುವಕರಿಗೆ ಅವಕಾಶ ನೀಡಿದ್ದಾರೆ.

ನಾನು ನನ್ನ ಖಾತೆ ನಿರ್ವಹಿಸುತ್ತೇನೆ, ಕರ್ನಾಟಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ. ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ನನಗೆ ಯಾವುದೇ ಬೇಸರವಿಲ್ಲ ಎಂದು ನಾರಾಯಣಗೌಡ ತಿಳಿಸಿದ್ರು.

ಇದನ್ನೂ ಓದಿ:ಕೃಷಿ ಸಚಿವ ಬಿ ಸಿ ಪಾಟೀಲ್​ ಹೇಳ್ತಾರೆ.. ದಿಲ್ಲಿಯಲ್ಲಿ ಪ್ರತಿಭಟಿಸುತ್ತಿರೋರು ರೈತರಲ್ವಂತೆ, ಭಯೋತ್ಪಾದಕರಂತೆ..

For All Latest Updates

ABOUT THE AUTHOR

...view details