ಕರ್ನಾಟಕ

karnataka

By

Published : Sep 6, 2019, 8:48 PM IST

Updated : Sep 6, 2019, 9:32 PM IST

ETV Bharat / state

ಕಾವೇರಿ ಕೂಗಿಗೆ ಧ್ವನಿಗೂಡಿಸಿದ ಜಿಲ್ಲಾಡಳಿತ: ನದಿ ಇಕ್ಕೆಲಗಳಲ್ಲಿ ಗಿಡ ನೆಡಲು ಪ್ಲಾನ್

ಕಾವೇರಿ ಕೂಗಿಗೆ ಧ್ವನಿ ಜೋರಾಗುತ್ತಿದೆ‌. ಯುವ ಜನತೆ ಜೊತೆಗೆ ಸಕ್ಕರೆ ಜಿಲ್ಲೆಯ ರೈತರೂ ಕೈಗೂಡಿಸಿದ್ದಾರೆ. ಈಗ  ಜಿಲ್ಲಾಡಳಿತವೂ ಕೂಡಾ  ಗಿಡ ನೆಡಲು ಕೈಜೋಡಿಸಿದ್ದು, ಪ್ಲಾನ್ ರೆಡಿ ಮಾಡಿಕೊಂಡಿದೆ.  ಇದೀಗ ಕಾವೇರಿ ಕೊಳ್ಳದ ಉಪ ನದಿಗಳ ಇಕ್ಕೆಲಗಳಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಗಿಡ ನೆಡಲು ರೈತರಿಗೆ ಆಹ್ವಾನ ನೀಡಿದೆ‌.

ಕಾವೇರಿ ಕೂಗಿಗೆ ಧ್ವನಿಯಾದ ಮಂಡ್ಯ ಜಿಲ್ಲಾಡಳಿತ; ನದಿ ಇಕ್ಕೆಲಗಳಲ್ಲಿ ಗಿಡ ನೆಡಲು ಪ್ಲಾನ್

ಮಂಡ್ಯ:ಕಾವೇರಿ ಕೂಗಿಗೆ ಧ್ವನಿ ಜೋರಾಗುತ್ತಿದೆ‌. ಯುವ ಜನತೆ ಜೊತೆಗೆ ಸಕ್ಕರೆ ಜಿಲ್ಲೆಯ ರೈತರೂ ಕೈಗೂಡಿಸಿದ್ದಾರೆ. ಈಗ ಜಿಲ್ಲಾಡಳಿತವೂ ಕೂಡಾ ಗಿಡ ನೆಡಲು ಕೈಜೋಡಿಸಿದ್ದು ಪ್ಲಾನ್ ರೆಡಿ ಮಾಡಿಕೊಂಡಿದೆ. ಇದೀಗ ಕಾವೇರಿ ಕೊಳ್ಳದ ಉಪ ನದಿಗಳ ಇಕ್ಕೆಲಗಳಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಗಿಡ ನೆಡಲು ರೈತರಿಗೆ ಆಹ್ವಾನ ನೀಡಿದೆ‌.

ಕಾವೇರಿ ಕೂಗಿಗೆ ಧ್ವನಿಯಾದ ಮಂಡ್ಯ ಜಿಲ್ಲಾಡಳಿತ; ನದಿ ಇಕ್ಕೆಲಗಳಲ್ಲಿ ಗಿಡ ನೆಡಲು ಪ್ಲಾನ್

ನಗರದಲ್ಲಿ ಇಂದು ನಡೆದ ಕಾವೇರಿ ಕೂಗು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಈ ಯೋಜನೆ ಬಗ್ಗೆ ತಿಳಿಸಿದರು. ಲೋಕಪಾವನಿ, ಶಿಂಷಾ ಹಾಗೂ ಮಾರ್ಕಾಂಡೇಯ ನದಿ ವ್ಯಾಪ್ತಿಯಲ್ಲಿ ಗಿಡ ನೆಡಲು ಆಕ್ಷನ್ ಪ್ಲಾನ್ ರೆಡಿ ಮಾಡಿದ್ದು, ಸರ್ಕಾರ ಒಪ್ಪಿದರೆ ಉದ್ಯೋಗ ಖಾತರಿ ಯೋಜನೆಯಡಿ ಹಣ ಕೊಟ್ಟು ಗಿಡ ನೆಡಲು ಕಾರ್ಯಕ್ರಮ ಜಾರಿಗೆ ತರಲಿದ್ದೇವೆ ಎಂದರು.

ಯೋಜನೆ ಬಗ್ಗೆ ಧ್ವನಿ ಗೂಡಿಸಿದ ಸಂಸದೆ ಸುಮಲತಾ ಅಂಬರೀಶ್, ಚುನಾವಣೆಯಲ್ಲಿ ಮಂಡ್ಯದ ಜನತೆ ಏನು ಎಂಬುದನ್ನು ತೋರಿಸಿದ್ದೀರಿ. ಕಾವೇರಿ ಕೂಗು ಚಳವಳಿಯಲ್ಲಿ ಪಾಲ್ಗೊಂಡು ಮತ್ತೊಮ್ಮೆ ಸಾಬೀತು ಪಡಿಸಿ ಎಂದು ಮನವಿ ಮಾಡಿದ್ದಾರೆ.

ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಮಾತನಾಡಿ, ರಾಜ ಮಹಾರಾಜರು ಅರಣ್ಯಕ್ಕೆ ಕೊಡುತ್ತಿದ್ದ ಒತ್ತಿನ ಬಗ್ಗೆ ಮಾಹಿತಿ ನೀಡಿ, ನಾನೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದೇನೆ. ಈ ಚಳವಳಿಯಲ್ಲಿ ಪಾಲ್ಗೊಂಡು ಗಿಡ ನೆಟ್ಟು ಪರಿಸರ ಕಾಪಾಡಿ ಎಂದು ಮನವಿ ಮಾಡಿದರು.

Last Updated : Sep 6, 2019, 9:32 PM IST

ABOUT THE AUTHOR

...view details