ಕರ್ನಾಟಕ

karnataka

ETV Bharat / state

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣ : ವಕೀಲೆಗೆ ಜಾಮೀನು ನೀಡಲು ಪಹಣಿ ತಂದ ಬಿಜೆಪಿ ಕಾರ್ಯಕರ್ತ - writer bhagavan face smeared with black ink

ಹಿಂದೂ ಧರ್ಮದ ಅವಹೇಳನ ಮಾಡುವ ಭಗವಾನ್ ಮುಖಕ್ಕೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದಾರೆ ಎಂದರು. ತಂದೆ ತಾಯಿ ಅವರಿಗೆ ಭಗವಾನ್ ಎಂದು ಹೆಸರಿಟ್ಟಿದ್ದು, ಸಮಾಜಕ್ಕೆ ಒಳ್ಳೆಯದು ಮಾಡಲಿ ಎಂದು..

mandya bjp activist ready to give bail for meera raghavendra
ಮಂಡ್ಯ

By

Published : Feb 5, 2021, 2:18 PM IST

ಮಂಡ್ಯ :ಚಿಂತಕ ಭಗವಾನ್ ಮುಖಕ್ಕೆ ವಕೀಲೆ ಮಸಿ ಬಳಿದ ವಿಚಾರಕ್ಕೆ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜಾಮೀನು ನೀಡಲು ಮಂಡ್ಯದ ಬಿಜೆಪಿ ಕಾರ್ಯಕರ್ತ ಮುಂದಾಗಿದ್ದಾರೆ.

ವಕೀಲೆ ಮೀರಾ ರಾಘವೇಂದ್ರಗೆ ಬೇಲ್ ನೀಡಲು ಬಿಜೆಪಿ ಮುಖಂಡ ಉತ್ಸುಕ..
ಸ್ವಂತ ಜಮೀನಿನ ಪಹಣಿ ಕಾಪಿ ತಂದು ಜಾಮೀನು ನೀಡಲು ಸಿದ್ಧ ಎಂದು ಶಿವಕುಮಾರ್ ಆರಾಧ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹೋದರಿ ಮೀರಾ ರಾಘವೇಂದ್ರ ಒಪ್ಪುವುದಾದ್ರೆ ನಾನು ಜಾಮೀನು ನೀಡುತ್ತೇನೆ.
ಹಿಂದೂ ಧರ್ಮದ ಅವಹೇಳನ ಮಾಡುವ ಭಗವಾನ್ ಮುಖಕ್ಕೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದಾರೆ ಎಂದರು. ತಂದೆ ತಾಯಿ ಅವರಿಗೆ ಭಗವಾನ್ ಎಂದು ಹೆಸರಿಟ್ಟಿದ್ದು, ಸಮಾಜಕ್ಕೆ ಒಳ್ಳೆಯದು ಮಾಡಲಿ ಎಂದು. ಆದ್ರೆ, ಅವರಿಗೆ ಪ್ರಾಣಿ ಪಕ್ಷಿಗಳ ಹೆಸರಿಡಬೇಕಿತ್ತು ಎಂದು ಚಿಂತಕ ‌ಭಗವಾನ್ ಅವರನ್ನು ಟೀಕಿಸಿದರು.

ABOUT THE AUTHOR

...view details