ಕರ್ನಾಟಕ

karnataka

ETV Bharat / state

ಹಳೇ ವೈಷಮ್ಯ: ಹಬ್ಬದ ಸಂಭ್ರಮದಲ್ಲಿದ್ದ ಗ್ರಾಪಂ ಸದಸ್ಯನ ಹತ್ಯೆ

ಮಂಡ್ಯ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮ ಪಂಚಾಯತ್ ಸದಸ್ಯನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.

By

Published : Feb 19, 2019, 1:05 PM IST

ಹಳೇ ವೈಷಮ್ಯ ಗ್ರಾಪಂ ಸದಸ್ಯನ ಹತ್ಯೆ

ಗ್ರಾಮ ಪಂಚಾಯತಿ ಸದಸ್ಯ ತಿಮ್ಮೇಗೌಡ(56) ಕೊಲೆಯಾದ ವ್ಯಕ್ತಿಯಾಗಿದ್ದು, ತಿಮ್ಮೇಗೌಡರ ಸಂಬಂಧಿಗಳಾದ ಗೌತಮ್, ವಿನಾಯಕ್ ಹಾಗೂ ಆಪಲ್ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮದ ಆನಂದ್ ಎಂಬ ದುಷ್ಕರ್ಮಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.


ಸ್ಥಳಕ್ಕೆ ಪಾಂಡವಪುರ ಪೊಲೀಸರು ಹಾಗೂ ಎಸ್‌ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ‌.

ABOUT THE AUTHOR

...view details