ಕರ್ನಾಟಕ

karnataka

ಮಂಡ್ಯ: ತೆಂಗಿನ ಮರ ಬಿದ್ದು ಓರ್ವ ಬಾಲಕ ಸಾವು, ಮತ್ತೋರ್ವ ಗಂಭೀರ ಗಾಯ

By

Published : Jul 12, 2021, 8:58 PM IST

ಮೃತ ಬಾಲಕನ ತಾಯಿ ನಂದಿನಿ ತನ್ನ ಇಬ್ಬರು ಮಕ್ಕಳನ್ನು ಮನೆ ಪಕ್ಕದಲ್ಲಿನ ನೆಲಬಾವಿಯಲ್ಲಿ ಪಾತ್ರೆಯನ್ನು ತೊಳೆಯಲು ಕರೆದುಕೊಂಡು ಹೋಗಿದ್ದರು. ಮಕ್ಕಳನ್ನು ದಡದಲ್ಲಿ ಕೂರಿಸಿ ಪಾತ್ರೆ ತೊಳೆಯುವ ವೇಳೆ ಒಣಗಿದ್ದ ತೆಂಗಿನಮರ ಆ ಇಬ್ಬರು ಮಕ್ಕಳ ಮೇಲೆ ಬಿದ್ದಿದೆ.

dry-coconut-tree-fell-on-kids-in-srirangapatna
ಬಾಲಕ ಸಾವು

ಮಂಡ್ಯ: ಇಬ್ಬರು ಬಾಲಕರ ಮೇಲೆ ಒಣಗಿದ್ದ ತೆಂಗಿನ ಮರ ಬಿದ್ದು ಓರ್ವ ಬಾಲಕ ಸಾವನ್ನಪ್ಪಿ, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಕುಶಾಲ್ ಗೌಡ (8) ಮೃತಪಟ್ಟ ಬಾಲಕನಾಗಿದ್ದು, ಜೈಶಂಕರ್ (6) ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮೃತ ಬಾಲಕನ ತಾಯಿ ನಂದಿನಿ ತನ್ನ ಇಬ್ಬರು ಮಕ್ಕಳನ್ನು ಮನೆ ಪಕ್ಕದಲ್ಲಿನ ನೆಲಬಾವಿಯಲ್ಲಿ ಪಾತ್ರೆಯನ್ನು ತೊಳೆಯಲು ಕರೆದುಕೊಂಡು ಹೋಗಿದ್ದರು. ಮಕ್ಕಳನ್ನು ದಡದಲ್ಲಿ ಕೂರಿಸಿ ಪಾತ್ರೆ ತೊಳೆಯುವ ವೇಳೆ ಒಣಗಿದ್ದ ತೆಂಗಿನಮರ ಆ ಇಬ್ಬರು ಮಕ್ಕಳ ಮೇಲೆ ಬಿದ್ದಿದೆ.

ಘಟನೆಯಲ್ಲಿ ಎರಡು ಮಕ್ಕಳಿಗೂ ತೀವ್ರ ಪೆಟ್ಟಾಗಿತ್ತು. ಗಾಯಾಳುಗಳನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕುಶಾಲ ಗೌಡ ಸಾವನ್ನಪ್ಪಿದ್ದು, ಬಾಲಕ ಜೈಶಂಕರ್​​ಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details