ಕರ್ನಾಟಕ

karnataka

ಕೋವಿಡ್​ ನಿಯಮ ಗಾಳಿಗೆ ತೂರಿ ತರಕಾರಿ ಖರೀದಿಗೆ ಮುಗಿಬಿದ್ದ ಸಗಟು ವ್ಯಾಪಾರಿಗಳು!

By

Published : Jun 1, 2021, 9:31 AM IST

ಕಳೆದ ಎರಡು ವಾರದಿಂದ ತರಕಾರಿ ಹರಾಜು ಪ್ರಕ್ರಿಯೆ ನಡೆಯದಿರುವ ಪರಿಣಾಮ ಸೋಮವಾರ ಸಂಜೆ ಗಂಗಾವತಿ ಹೊರ ವಲಯದಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಸಮೀಪದ ಕನಕಗಿರಿ ರಸ್ತೆಯಲ್ಲಿ ಕೋವಿಡ್​ ನಿಯಮ ಗಾಳಿಗೆ ತೂರಿ ಸಗಟು ವ್ಯಾಪಾರಿಗಳು ತರಕಾರಿ ಖರೀದಿಗೆ ಮುಗಿಬಿದ್ದರು.

gangavathi
ತರಕಾರಿ ಖರೀದಿಗೆ ಮುಗಿಬಿದ್ದ ಸಗಟು ವ್ಯಾಪಾರಿಗಳು

ಗಂಗಾವತಿ (ಕೊಪ್ಪಳ):ನಗರದ ಹೊರ ವಲಯದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಸಮೀಪದ ಕನಕಗಿರಿ ರಸ್ತೆಯಲ್ಲಿನ ಬಯಲು ಜಾಗದಲ್ಲಿ ನೂರಾರು ಸಗಟು ವ್ಯಾಪಾರಿಗಳು ಕೋವಿಡ್​ ನಿಯಮ ಗಾಳಿಗೆ ತೂರಿ ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.

ತರಕಾರಿ ಖರೀದಿಗೆ ಮುಗಿಬಿದ್ದ ಸಗಟು ವ್ಯಾಪಾರಿಗಳು

ಕಳೆದ ಎರಡು ವಾರದಿಂದ ತರಕಾರಿ ಹರಾಜು ನಡೆಯದಿರುವ ಪರಿಣಾಮ ಸೋಮವಾರ ಸಂಜೆ ತರಕಾರಿ ಹೊತ್ತ ಸುಮಾರು 50ಕ್ಕೂ ಹೆಚ್ಚು ವಾಹನಗಳು ಬಂದಿದ್ದವು. ಹೀಗಾಗಿ, ಕೋವಿಡ್​ ನಿಯಮ ಗಾಳಿಗೆ ತೂರಿ ಸಗಟು ವ್ಯಾಪಾರಿಗಳು ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.

ದುಪ್ಪಟ್ಟು ಬೆಲೆಗೆ ಮಾರಾಟ:

ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಅಗತ್ಯ ವಸ್ತುಗಳು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಹಾಗೂ ಕಂದಾಯ ಅಧಿಕಾರಿಗಳ ಎಚ್ಚರಿಕೆಯ ನಡುವೆಯೇ ಸಗಟು ತರಕಾರಿ ಬೆಲೆ ಎರಡು-ಮೂರು ಪಟ್ಟು ಹೆಚ್ಚಾಗಿತ್ತು. ಸಾಮಾನ್ಯ ದಿನಗಳಲ್ಲಿ 20 ರಿಂದ 30 ರೂಪಾಯಿಗೆ ಸಿಗುವ ತರಕಾರಿ ಬೆಲೆ 60 ರೂಪಾಯಿಗೆ ಏರಿಕೆಯಾಗಿರುವುದು ಕಂಡು ಬಂತು.

ಇದನ್ನೂ ಓದಿ:ಶಾಕಿಂಗ್ ನ್ಯೂಸ್​!: ಕೊರೊನಾ ಸೋಂಕಿತರಲ್ಲದಿದ್ದರೂ 40 ಮಂದಿಗೆ ಬ್ಲ್ಯಾಕ್ ಫಂಗಸ್ ದೃಢ!

ABOUT THE AUTHOR

...view details