ಕರ್ನಾಟಕ

karnataka

ಕೊಪ್ಪಳದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು: ಆರೋಪಿ ಅರೆಸ್ಟ್

ಕೊಪ್ಪಳ ಕಾರಟಗಿ ಪಟ್ಟಣದ ಎರಡು ಮನೆಗಳಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

By

Published : Nov 22, 2019, 11:40 AM IST

Published : Nov 22, 2019, 11:40 AM IST

ಆರೋಪಿ ಅಂದರ್​

ಕೊಪ್ಪಳ: ಕಾರಟಗಿ ಪಟ್ಟಣದ ಎರಡು ಮನೆಗಳಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಲೋಣಿ ಓಣಿಯ ಮಲ್ಲಪ್ಪ ಕೇಲೂರು ಎಂಬವರ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು, 23 ಗ್ರಾಂ ಚಿನ್ನ ಮತ್ತು 40 ಗ್ರಾಂ ಬೆಳ್ಳಿ, ಹಾಗೂ ವೀರೇಶ ಗೌಡ ಎಂಬವರ ಮನೆಯ ಬೀಗ ಮುರಿದು 50 ಗ್ರಾಂ ಚಿನ್ನ, ಒಂದು ಮೊಬೈಲ್ ಹಾಗೂ 68 ಸಾವಿರ ರೂಪಾಯಿ ನಗದು ಕಳವು ಮಾಡಿದ್ದರು.

ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು, ಆರೋಪಿ ಕಾರಟಗಿಯ ಯಮನೂರ ಬಾಲಪ್ಪ ಜೀರಾಳ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 63 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details