ಕರ್ನಾಟಕ

karnataka

By

Published : May 20, 2020, 1:25 PM IST

ETV Bharat / state

ಕೊಪ್ಪಳಕ್ಕೆ ಮತ್ತೊಂದು ಆತಂಕ... ಕೊರೊನಾ ಸೋಂಕಿತನಿದ್ದ ಬಸ್​ನಲ್ಲಿದ್ರಂತೆ 9 ಮಂದಿ ಭಿಕ್ಷುಕರು!

ಕೊಪ್ಪಳದಲ್ಲಿ ಮೂರು ಜನ ಕೊರೊನಾ ಸೋಂಕಿತರೊಂದಿಗೆ 141 ಜನ ಪ್ರಾಥಮಿಕ ಸಂಪರ್ಕ ಹಾಗೂ 97 ಮಂದಿ ದ್ವೀತಿಯ ಸಂಪರ್ಕ ಹೊಂದಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ 141 ಜನರಲ್ಲಿ ಇಬ್ಬರು ಇನ್ನೂ ಸಿಕ್ಕಿಲ್ಲ. ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್ ತಿಳಿಸಿದರು.

there were 9 beggars in bus in which corona patient travelled
ಕೊಪ್ಪಳಕ್ಕೆ ಮತ್ತೊಂದು ಆತಂಕ,,, ಸೊಂಕಿತನಿದ್ದ ಬಸ್​ನಲ್ಲಿದ್ರು 9 ಬಿಕ್ಷುಕರು....

ಕೊಪ್ಪಳ:ಜಿಲ್ಲೆಯಲ್ಲಿ ನಿನ್ನೆ ಪತ್ತೆಯಾಗಿರುವ ಮೂವರು ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರನ್ನೆಲ್ಲಾ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆಯಾದರೂ ಇನ್ನೂ ಇಬ್ಬರು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ತಿಳಿಸಿದ್ದಾರೆ.

ಮೂರು ಜನ ಕೊರೊನಾ ಸೋಂಕಿತರೊಂದಿಗೆ 141 ಜನ ಪ್ರಾಥಮಿಕ ಸಂಪರ್ಕ ಹಾಗೂ 97 ಮಂದಿ ದ್ವೀತಿಯ ಸಂಪರ್ಕ ಹೊಂದಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ 141 ಜನರಲ್ಲಿ ಇಬ್ಬರು ಇನ್ನೂ ಸಿಕ್ಕಿಲ್ಲ. ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

P-1173 ಸೋಂಕಿತನೊಂದಿಗೆ 90 ಜನ ಪ್ರಾಥಮಿಕ ಹಾಗೂ 87 ಜನ ದ್ವೀತಿಯ ಸಂಪರ್ಕ ಹೊಂದಿದ್ದಾರೆ‌. ಈ ಸೋಂಕಿತ ಮುಂಬೈಯಿಂದ ಹುಬ್ಬಳ್ಳಿ, ಗದಗ ಮೂಲಕ ಕೊಪ್ಪಳಕ್ಕೆ ಟಾಟಾ ಏಸ್​​ನಲ್ಲಿ ಬಂದು ಬಳಿಕ ಕೊಪ್ಪಳದಿಂದ‌ ಕುಷ್ಟಗಿಗೆ ಬಸ್​​ನಲ್ಲಿ ಹೋಗಿದ್ದಾನೆ. ಈತ ಪ್ರಯಾಣಿಸಿದ ಬಸ್​​ನ ಪ್ರಯಾಣಿಕರು ಪ್ರಾಥಮಿಕ ಸಂಪರ್ಕಿತರಾಗುತ್ತಾರೆ. ಈ ಪ್ರಯಾಣಿಕರಲ್ಲಿ ಒಂಭತ್ತು ಜನರು ಭಿಕ್ಷುಕರಿದ್ದದ್ದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ಇನ್ನು P-1174 ಸೋಂಕಿತೆಯೊಂದಿಗೆ 47 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. P-1175 ಸೋಂಕಿತನೊಂದಿಗೆ 50 ಜನ ಪ್ರಾಥಮಿಕ ಸಂಪರ್ಕ ಹಾಗೂ 10 ಜನ ದ್ವೀತಿಯ ಸಂಪರ್ಕ ಹೊಂದಿದ್ದಾರೆ‌. P-1174 ಮತ್ತು P-1175ರನ್ನು ಒಂದೇ ಕಡೆ ಕ್ವಾರಂಟೈನ್‌ ಮಾಡಿರುವುದರಿಂದ ಇಬ್ಬರಿಗೂ 46 ಜನ ಪ್ರಾಥಮಿಕ ಸಂಪರ್ಕ ಹೊಂದಿದವರಿರುತ್ತಾರೆ. ಆದರೆ ವ್ಯಕ್ತಿಗತವಾಗಿ ನೋಡಿದಾಗ ಈ ಇಬ್ಬರ ಪ್ರಾಥಮಿಕ ಸಂಪರ್ಕಿತರ ಸಂಖ್ಯೆ ಬೇರೆ ಬೇರೆಯಾಗುತ್ತದೆ. ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ.

P-1173 ಬಂದಿದ್ದ ಟಾಟಾ ಏಸ್ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿ ಪತ್ತೆಯಾಗ್ತಿಲ್ಲ. ಇವರನ್ನು ಚೆಕ್ ಪೋಸ್ಟ್ ಹಾಗೂ ಸಿ‌ಡಿಆರ್ ಮೂಲಕ ಪತ್ತೆ ಮಾಡುವ ಕೆಲಸ ನಡಿದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details