ಕರ್ನಾಟಕ

karnataka

ETV Bharat / state

1,200 ದಿನಸಿ ಪದಾರ್ಥಗಳ ಕಿಟ್ ವಿತರಿಸಿದ ಶಾಸಕ ಅಮರೇಗೌಡ ಬಯ್ಯಾಪುರ

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು 1,200 ದಿನಸಿ ಅಹಾರ ಪದಾರ್ಥಗಳ ಕಿಟ್​ನ್ನು ತಹಶೀಲ್ದಾರ್​ ಎಂ.ಸಿದ್ದೇಶ ಅವರಿಗೆ ಹಸ್ತಾಂತರಿಸಿದರು.

By

Published : Apr 20, 2020, 9:41 PM IST

grocery items kit distribute
ದಿನಸಿ ಪದಾರ್ಥಗಳ ಕಿಟ್ ವಿತರಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ

ಕುಷ್ಟಗಿ: ತಾಲೂಕಿನ ನಿರ್ಗತಿಕರಿಗೆ ಹಾಗೂ ಪಡಿತರ ರಹಿತರಿಗೆ ಶಾಸಕ ಅಮರೇಗೌಡ ಪಾಟೀಲ​​ ಬಯ್ಯಾಪುರ ಅವರು, 1ವಾರಕ್ಕೆ ಆಗುವಷ್ಟು 1,200 ದಿನಸಿ ಅಹಾರ ಪದಾರ್ಥಗಳ ಕಿಟ್​ನ್ನು ತಹಶೀಲ್ದಾರ್​​ ಎಂ.ಸಿದ್ದೇಶ ಅವರಿಗೆ ಹಸ್ತಾಂತರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೇವೆ ಅಲ್ಪ ಸೇವೆಯಾಗಿದೆ. ಮುಂದೆ ಅಗತ್ಯವಾದರೆ ಇನ್ನಷ್ಟು ಕಿಟ್​ಗಳನ್ನು ವಿತರಿಸುವುದಾಗಿ ತಿಳಿಸಿದರು. ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ನಿರ್ಗತಿಕರು, ಕಾರ್ಡ ರಹಿತರಿಗೆ ಇದನ್ನು ನೀಡಲಾಗುತ್ತಿದೆ. ಈಗಾಗಲೇ ಅಹಾರ ಇಲಾಖೆಯಿಂದ 2 ತಿಂಗಳ ಪಡಿತರ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. 3ನೇ ತಿಂಗಳಿನ ಪಡಿತರವನ್ನು ಮೇ.1ರಿಂದ ಮೇ. 5ರವರೆಗೆ ಅಕ್ಕಿ ಬೇಳೆ ವಿತರಿಸಲು ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದರು.

ಇನ್ನು ಲಾಕಡೌನ್​ನಿಂದಾಗಿ ಬಡವರು, ನಿರ್ಗತಿಕರು, ಕಾರ್ಡ ರಹಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಸ್ಥಿತಿವಂತ ದಾನಿಗಳು ಇವರ ನೆರವಿಗೆ ಬರಬೇಕೆಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮನವಿ ಮಾಡಿದರು.

ABOUT THE AUTHOR

...view details