ಕರ್ನಾಟಕ

karnataka

ಭಾರತ-ಚೀನಾ ಘರ್ಷಣೆ ವಿಚಾರದಲ್ಲಿ ಪ್ರಧಾನಿ ಮೌನ ವಹಿಸಿರುವುದು ಸರಿಯಲ್ಲ: ಶಾಸಕ ಬಯ್ಯಾಪೂರ

By

Published : Jun 26, 2020, 4:47 PM IST

ಭಾರತ-ಚೀನಾ ಘರ್ಷಣೆ ಸಮಾಚಾರವನ್ನ ಮಾಧ್ಯಮದವರೇ ಪ್ರಕಟಿಸುತ್ತಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಒಂದು ಮಾತು ಆಡುತ್ತಿಲ್ಲ. ಇಂತಹ ಸನ್ನಿವೇಶದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುವೇ ವಿಚಾರವನ್ನ ಬಹಿರಂಗ ಪಡಿಸದೇ ಮೌನವಹಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Mla Amaregowda Patil Biayapura statement
ಭಾರತ-ಚೀನಾ ಘರ್ಷಣೆ ವಿಚಾರದಲ್ಲಿ ಪ್ರಧಾನಿ ಮೌನ ವಹಿಸಿರುವುದು ಸರಿಯಲ್ಲ: ಅಮರೇಗೌಡ ಪಾಟೀಲ ಬಯ್ಯಾಪೂರ

ಕುಷ್ಟಗಿ (ಕೊಪ್ಪಳ):ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ ನಡೆದಿದ್ದು, ಈ ವೇಳೆ ನಮ್ಮ 20 ಸೈನಿಕರು ಹುತಾತ್ಮರಾಗಿದ್ದಾರೆ. ಇಂತಹ ಸನ್ನಿವೇಶದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುವೇ ವಿಚಾರವನ್ನ ಬಹಿರಂಗ ಪಡಿಸದೇ ಮೌನ ವಹಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಸಮಾಧಾನ ಹೇಳಿದ್ದಾರೆ.

ಕಾರ್ಗಿಲ್ ವೀರಯೋಧ ಮಲ್ಲಯ್ಯ ವೃತ್ತದಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಅವರು, ಭಾರತ-ಚೀನಾ ಘರ್ಷಣೆ ಸಮಾಚಾರವನ್ನ ಮಾಧ್ಯಮದವರೇ ಪ್ರಕಟಿಸುತ್ತಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಒಂದು ಮಾತು ಸಹ ಆಡುತ್ತಿಲ್ಲ. ಈ ವಿಚಾರವನ್ನ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಯರು ಹೇಳಬೇಕು. ಪ್ರಸ್ತುತ ಸನಿವೇಶದಲ್ಲಿ ಏನೋ ಯಡವಟ್ಟಾಗಿದೆ. ನಮ್ಮ ದೇಶದ ವಿರುದ್ಧ ನಮ್ಮ ಸುತ್ತಮುತ್ತಲಿನ ರಾಷ್ಟ್ರಗಳು ತಿರುಗಿ ಬೀಳುತ್ತಿವೆ. ಚೀನಾ-ಪಾಕಿಸ್ತಾನ, ಇನ್ನೊಂದೆಡೆ ನೇಪಾಳ ಸಹ ತಿರುಗಿ ಬಿದ್ದಿದೆ. ನೆಹರು, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರು ಇಂತಹ ಸಂದರ್ಭಗಳಲ್ಲಿ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುತ್ತಿದ್ದರು. ಈಗ ಮೋದಿಯವರು ಮೌನ ಮುರಿಯಬೇಕಿದೆ ಎಂದರು.

ಚೀನಾದವರು ಯುದ್ಧ ಟ್ಯಾಂಕರ್​ಗಳನ್ನ ಭಾರತದ ಗಡಿಯತ್ತ ನುಗ್ಗಿಸುತ್ತಿರುವುದು ಮಾಧ್ಯಮದಿಂದ ಗೊತ್ತಾಗುತ್ತಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ, ದೇಶದ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪಕ್ಷದವರು ರಾಜಕೀಯ ಮಾಡದೆ, ಪ್ರಧಾನಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಬೆಂಲಿಸುತ್ತೇವೆ ಎಂದರು.

ABOUT THE AUTHOR

...view details