ಕರ್ನಾಟಕ

karnataka

ETV Bharat / state

ಪೊಲೀಸರು ಬೆತ್ತ ಎತ್ತಬೇಡಿ; ಊಟ, ನೀರಿಲ್ಲದೇ ಜೈಲಿನಲ್ಲಿ ಕೂಡಿಹಾಕಿ...ಡಿಸಿಎಂ ಎಚ್ಚರಿಕೆ

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸದಾ ಕಾರ್ಯಾಚರಣೆಯಲ್ಲಿ ಇರುವಂತೆ ನೋಡಿಕೊಳ್ಳಿ. ತುರ್ತು ಪ್ರಕರಣಗಳನ್ನು ಬೇಗನೇ ರವಾನಿಸುವುದಕ್ಕಾಗಿ ಪ್ರತಿ ತಾಲೂಕಿಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಟ್ಟುಕೊಳ್ಳಿ ಎಂದು ಸವದಿ ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚಿಸಿದರು.

By

Published : Mar 27, 2020, 11:40 PM IST

Updated : Mar 28, 2020, 9:48 AM IST

meeting held by Deputy Chief Minister Lakshmana Lavadi
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಲಕ್ಷ್ಮಣ ಸವದಿ

ಕೊಪ್ಪಳ: ಜಿಲ್ಲೆಯಲ್ಲಿ ವಾರ್ಡ್​​​ವಾರು ತರಕಾರಿ ಪೂರೈಸಲಾಗುತ್ತಿದೆ. ಅದನ್ನು‌ ಮುಂದುವರೆಸಿ. ರಾಜ್ಯದಲ್ಲಿ ಪಡಿತರವನ್ನು ಮನೆಗೆ ನೇರವಾಗಿ ನೀಡಲು ಉದ್ದೇಶಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಅನಗತ್ಯವಾಗಿ ಓಡಾಡುವ ಪೋಲಿಗಳನ್ನು ಪೊಲೀಸರು ಬೆತ್ತದಿಂದ ಹೊಡೆಯುತ್ತಿರುವುದು ಕಂಡುಬರುತ್ತಿದೆ. ಅದರ ಬದಲಿಗೆ ಠಾಣೆಯಲ್ಲೇ ಅನ್ನ ನೀರು ಕೊಡದೇ ಒಂದು ದಿನ ಕೂಡಿಹಾಕಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೊಸಪೇಟೆಯ ಅಮರಾವತಿ ಅತಿಥಿಗೃಹದಲ್ಲಿ ಕೋವಿಡ್-19 ಹಿನ್ನೆಲೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್-19 ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದಲ್ಲಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇದುವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಇದು ಅತ್ಯಂತ ಖುಷಿಯ ಸಂಗತಿ. ಹೊರಗಡೆಯಿಂದ ಬಂದ ಜನರ ಮೇಲೆ ತೀವ್ರ ನಿಗಾವಹಿಸಿ ಮತ್ತು ಆರೋಗ್ಯ ಏರುಪೇರಾದಲ್ಲಿ ಕೂಡಲೇ ಚಿಕಿತ್ಸೆ ನೀಡಬೇಕು ಎಂದರು.

ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಜಿಲ್ಲೆಯಲ್ಲಿ 16,791 ಜನರಿಗೆ ತಪಾಸಣೆ ಮಾಡಲಾಗಿದೆ. 32 ಸ್ಯಾಂಪಲ್ ಕಳುಹಿಸಲಾಗಿತ್ತು. ಅದರಲ್ಲಿ 6ಮಂದಿ ವರದಿಗಾಗಿ ಕಾಯುತ್ತಿದ್ದೇವೆ. ಉಳಿದವು ನೆಗೆಟಿವ್ ಬಂದಿದೆ ಎಂದ ಅವರು ಮಾಸ್ಕ್, ಸ್ಯಾನಿಟೈಸರ್​​​​, ಗ್ಲೌಸ್ ಸೇರಿದಂತೆ ಎಲ್ಲವೂ ನಮ್ಮಲ್ಲಿ ಲಭ್ಯವಿವೆ. 28 ರ್ಯಾಪಿಡ್ ರೆಸ್ಪಾನ್ಸ್​​ ತಂಡಗಳು, 17 ಸಮಿತಿಗಳನ್ನು ರಚಿಸಲಾಗಿದೆ ಎಂದರು.

Last Updated : Mar 28, 2020, 9:48 AM IST

ABOUT THE AUTHOR

...view details