ಕೊಪ್ಪಳ: ಕೆರೆಯಂಗಳದಿಂದ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ 10 ಟಿಪ್ಪರ್ ಸೇರಿದಂತೆ ಒಟ್ಟು 17 ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮಣ್ಣು ಸಾಗಣೆ ವಿರುದ್ಧ ಸಮರ.. 17 ವಾಹನಗಳ ಸೀಜ್ ಮಾಡಿದ ಅಧಿಕಾರಿಗಳು
ದಾಳಿ ನಡೆಸಿದ ಕಾರಟಗಿ ತಹಶೀಲ್ದಾರ್ ಆರ್. ಕವಿತಾ ನೇತೃತ್ವದ ಅಧಿಕಾರಿಗಳು ಮಣ್ಣು ಸಾಗಿಸುತ್ತಿದ್ದ 10 ಟಿಪ್ಪರ್, ಒಂದು ಲಾರಿ ಹಾಗೂ 6 ಹಿಟಾಚಿಗಳನ್ನು ವಶಪಡಿಸಿಕೊಂಡಿದ್ದಾರೆ.
17 ವಾಹನಗಳ ಜಫ್ತಿ
ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣಾ ಗ್ರಾಮದಲ್ಲಿ ಕೆರೆ ಹಾಗೂ ಇನ್ನಿತರೆ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಕಾರಟಗಿ ತಹಶೀಲ್ದಾರ್ ಆರ್. ಕವಿತಾ ನೇತೃತ್ವದ ಅಧಿಕಾರಿಗಳು ಮಣ್ಣು ಸಾಗಿಸುತ್ತಿದ್ದ 10 ಟಿಪ್ಪರ್, ಒಂದು ಲಾರಿ ಹಾಗೂ 6 ಹಿಟಾಚಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಮಣ್ಣು ಸಾಗಾಣಿಕೆ ವಿರುದ್ಧ ಅಧಿಕಾರಿಗಳು ಹಾಗೂ ಪೊಲೀಸರು ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.