ಕರ್ನಾಟಕ

karnataka

ETV Bharat / state

ನಾನು ರಾಜಕೀಯ ಬಿಟ್ಟಿದ್ದೇನೆ, ಕೇಳಿದವರಿಗೆ ಸಲಹೆ ಕೊಡುತ್ತೇನೆ ಅಷ್ಟೆ: ಪೇಜಾವರ ಶ್ರೀ

ಎಲ್ಲ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ. ಮೋದಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುವುದು ಪಕ್ಷದ ವಿಷಯ ಎಂದರು.

By

Published : Mar 24, 2019, 5:19 PM IST

ಪೇಜಾವರ ಶ್ರೀ

ಕೊಪ್ಪಳ:ನಾನು ಸದ್ಯ ಚುನಾವಣೆಯಿಂದ ತಟಸ್ಥವಾಗಿದ್ದು, ಕೇಳಿದವರಿಗೆ ಸಲಹೆ ಕೊಡ್ತೀನಿ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಜಿಲ್ಲೆಯ ಆನೆಗುಂದಿ ಬಳಿಯ ನವವೃಂದಾವನಗಳ ದರ್ಶನದ ಬಳಿಕ ಮಾತನಾಡಿದ ಶ್ರೀಗಳು, ದೇಶದ ಹಿತ, ಅಭಿವೃದ್ದಿ ಹಾಗೂ ಹಿಂದೂ ಧರ್ಮಕ್ಕೆ ಅನ್ಯಾಯವಾಗಬಾರದು. ಇದನ್ನು ನೋಡಿ ಮತ ಹಾಕಿ ಎಂದು ತಿಳಿಸಿದರು.

ಎಲ್ಲ ಪಕ್ಷದಲ್ಲೂ ನನ್ನ ಶಿಷ್ಯರಿದ್ದಾರೆ. ಸದ್ಯಕ್ಕೆ ನಾನು ರಾಜಕೀಯ ಬಿಟ್ಟಿದ್ದೇನೆ. ಕೇಳಿದವರಿಗೆಸಲಹೆ ಕೊಡುತ್ತೇನೆ ಎಂದರು.

ಪೇಜಾವರ ಶ್ರೀ

ಇನ್ನು ಎಲ್ಲ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲೂ ಕುಟುಂಬ ರಾಜಕಾರಣವಿದೆ. ಮೋದಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುವುದು ಪಕ್ಷದ ವಿಷಯ. ರಾಜಕೀಯವಾಗಿ ನನ್ನನ್ನು ಹೆಚ್ಚಿಗೆ ಕೇಳಬೇಡಿ. ಹಿಂದೂ ಧರ್ಮದ ಪ್ರಚಾರ ಮಾಡುವುದು ನನ್ನ ಕೆಲಸ. ನನಗೆ ರಾಜಕೀಯ ಗೊತ್ತಾಗಲ್ಲ ಎಂದರು.

ABOUT THE AUTHOR

...view details