ಕುಷ್ಟಗಿ(ಕೊಪ್ಪಳ):ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ಸಭಾ ಮಂಟಪದಲ್ಲಿ ಜ್ಞಾನ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಕೊರೊನಾ ವೈರಸ್ ತಡೆಗಟ್ಟುವ ವೈರಾಣು ನಿಯಂತ್ರಿಕ ಮಾಸ್ಕ್ ವಿತರಿಸಲಾಯಿತು.
ಜ್ಞಾನ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಮಾಸ್ಕ್ ವಿತರಣೆ
ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ಸಭಾ ಮಂಟಪದಲ್ಲಿ ಜ್ಞಾನ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಕೊರೊನಾ ವೈರಸ್ ತಡೆಗಟ್ಟುವ ವೈರಾಣು ನಿಯಂತ್ರಿಕ ಮಾಸ್ಕ್ ವಿತರಿಸಲಾಯಿತು.
ಜ್ಞಾನಜ್ಯೋತಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ವೈರಾಣು ನಿಯಂತ್ರಿಕ ಮಾಸ್ಕ್ ವಿತರಣೆ
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರುಳೀಧರ ಹೆಚ್.ಎಲ್. ತಾಪಂ ಸದಸ್ಯ ಮಹಾಂತೇಶ ಬದಾಮಿ ಕೊಡುಗೆಯಾಗಿ ನೀಡಿದ ಮಾಸ್ಕ್ಗಳನ್ಮು ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರಿಗೆ ಕೊರೊನಾ ವೈರಸ್ ನಿಯಂತ್ರಿಸಲು ಅನುಸರಿಸಬೇಕಾದ ಕ್ರಮಗಳು, ಶುಚಿತ್ವದ ಸೂಚನೆಗಳನ್ನು ಪಾಲಿಸಲು ಪ್ರೇರೇಪಿಸಿ ಕೊರೊನಾ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.