ಕುಷ್ಟಗಿ(ಕೊಪ್ಪಳ):ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕುಷ್ಟಗಿ-ವಣಗೇರಾ ಮಧ್ಯೆ ಟ್ರಾಕ್ಟರ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹೆಡ್ಲೈಟ್ ಇಲ್ಲದೆ ಬರುತ್ತಿದ್ದ ಟ್ರಾಕ್ಟರ್ಗೆ ಬೈಕ್ ಡಿಕ್ಕಿ: ಯುವಕ ಸಾವು
ಕುಷ್ಟಗಿಯಿಂದ ವಣಗೇರಾಕ್ಕೆ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದ ವೇಳೆ ಹೆಡ್ ಲೈಟ್ ಇಲ್ಲದೇ ಎದುರಿಗೆ ಬಂದ ಟ್ಯ್ರಾಕ್ಟರ್ ಎಂಜಿನ್ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಯುವಕ ಮಂಜುನಾಥ ಇಲಕಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟ್ರಾಕ್ಟರ್ಗೆ ಬೈಕ್ ಡಿಕ್ಕಿ
ವಣಗೇರಾ ನಿವಾಸಿ ಮಂಜುನಾಥ ದೊಡ್ಡಪ್ಪ ಇಲಕಲ್ (25) ಮೃತ ದುರ್ದೈವಿ. ಈತ ಕುಷ್ಟಗಿಯಿಂದ ವಣಗೇರಾಕ್ಕೆ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದ ವೇಳೆ ಹೆಡ್ ಲೈಟ್ ಇಲ್ಲದೇ ಎದುರಿಗೆ ಬಂದ ಟ್ಯ್ರಾಕ್ಟರ್ ಎಂಜಿನ್ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಯುವಕ ಮಂಜುನಾಥ ಇಲಕಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದು, ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.