ಕರ್ನಾಟಕ

karnataka

ಮುಷ್ಕರದ ನಡುವೆಯೇ ಗಂಗಾವತಿಯಿಂದ ವಿಜಯಪುರಕ್ಕೆ ಬಸ್​​ ಸೇವೆ ಆರಂಭ

By

Published : Apr 7, 2021, 9:02 PM IST

ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ನಡುವೆಯೂ ಕೆಲ ಸಿಬ್ಬಂದಿ ಸಹಾಯದಿಂದ ಗಂಗಾವತಿಯಲ್ಲಿ ಬಸ್​ ಸಂಚಾರ ಆರಂಭವಾಗಿದೆ.

Bus service from Gangavati to Vijayapura
ಗಂಗಾವತಿಯಿಂದ ವಿಜಯಪುರಕ್ಕೆ ಬಸ್​ ಸೇವೆ

ಗಂಗಾವತಿ: ಸಾರಿಗೆ ನೌಕರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರದ ಹಿನ್ನೆಲೆ ಸಂಪೂರ್ಣ ಸ್ಥಗಿತವಾಗಿದ್ದ ಬಸ್​​ ಸೇವೆಯನ್ನು 18 ಗಂಟೆಗಳ ಬಳಿಕ ಗಂಗಾವತಿಯಲ್ಲಿ ಆರಂಭಿಸಲಾಯಿತು.

ಗಂಗಾವತಿಯಿಂದ ವಿಜಯಪುರಕ್ಕೆ ಬಸ್​ ಸೇವೆ

ನೌಕರರು ಕರ್ತವ್ಯಕ್ಕೆ ಹಾಜರಾಗದ ಮಧ್ಯೆಯೂ ಅಧಿಕಾರಗಳ ಮನವೊಲಿಕೆಗೆ ಕರಗಿದ ಒಂದಿಬ್ಬರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗಂಗಾವತಿಯಿಂದ ವಿಜಯಪುರಕ್ಕೆ ಸಂಚರಿಸುವ ಬಸ್​ಗೆ ಅಧಿಕಾರಿಗಳು ಸಾಂಕೇತಿಕವಾಗಿ ಚಾಲನೆ ನೀಡಿದರು.

ಕರ್ತವ್ಯಕ್ಕೆ ಹಾಜರಾಗಿರುವುದನ್ನು ಖಂಡಿಸಿ ಮುಷ್ಕರನಿರತರು ಸಮಸ್ಯೆ ತಂದೊಡ್ಡಬಹುದು ಎಂಬ ಆತಂಕದ ಹಿನ್ನೆಲೆ ಕರ್ತವ್ಯಕ್ಕೆ ಸಿಬ್ಬಂದಿ ಹಿಂದೇಟು ಹಾಕಿದರು. ಆದರೆ ಅಧಿಕಾರಿಗಳು, ಮಾರ್ಗ ಮಧ್ಯೆ ವಾಹನಕ್ಕೆ ಅಥವಾ ನೌಕರರಿಗೆ ಏನೇ ಸಮಸ್ಯೆ ಬಂದರೂ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.

ABOUT THE AUTHOR

...view details