ಗಂಗಾವತಿ: ಸಾರಿಗೆ ನೌಕರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರದ ಹಿನ್ನೆಲೆ ಸಂಪೂರ್ಣ ಸ್ಥಗಿತವಾಗಿದ್ದ ಬಸ್ ಸೇವೆಯನ್ನು 18 ಗಂಟೆಗಳ ಬಳಿಕ ಗಂಗಾವತಿಯಲ್ಲಿ ಆರಂಭಿಸಲಾಯಿತು.
ನೌಕರರು ಕರ್ತವ್ಯಕ್ಕೆ ಹಾಜರಾಗದ ಮಧ್ಯೆಯೂ ಅಧಿಕಾರಗಳ ಮನವೊಲಿಕೆಗೆ ಕರಗಿದ ಒಂದಿಬ್ಬರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗಂಗಾವತಿಯಿಂದ ವಿಜಯಪುರಕ್ಕೆ ಸಂಚರಿಸುವ ಬಸ್ಗೆ ಅಧಿಕಾರಿಗಳು ಸಾಂಕೇತಿಕವಾಗಿ ಚಾಲನೆ ನೀಡಿದರು.
ಕರ್ತವ್ಯಕ್ಕೆ ಹಾಜರಾಗಿರುವುದನ್ನು ಖಂಡಿಸಿ ಮುಷ್ಕರನಿರತರು ಸಮಸ್ಯೆ ತಂದೊಡ್ಡಬಹುದು ಎಂಬ ಆತಂಕದ ಹಿನ್ನೆಲೆ ಕರ್ತವ್ಯಕ್ಕೆ ಸಿಬ್ಬಂದಿ ಹಿಂದೇಟು ಹಾಕಿದರು. ಆದರೆ ಅಧಿಕಾರಿಗಳು, ಮಾರ್ಗ ಮಧ್ಯೆ ವಾಹನಕ್ಕೆ ಅಥವಾ ನೌಕರರಿಗೆ ಏನೇ ಸಮಸ್ಯೆ ಬಂದರೂ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.