ಕರ್ನಾಟಕ

karnataka

By

Published : Oct 21, 2019, 10:31 PM IST

ETV Bharat / state

ಗಾಂಧೀಜಿ ಕನಸುಗಳನ್ನು ನನಸು ಮಾಡಲು ಬಿಜೆಪಿ ಪಕ್ಷ ಸಿದ್ದ.. ಸಂಸದ ಎಸ್.ಮುನಿಸ್ವಾಮಿ

ಒಂದು ಕಡೆ ನೆರೆ ಪರಿಹಾರ ಇನ್ನೂ ಸಿಗಲಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ದ ರಾಜ್ಯದ ಜನತೆ ಗುಡುಗುತ್ತಿದ್ದಾರೆ. ಮತ್ತೊಂದು ಕಡೆ ಪಾದಯಾತ್ರೆಯನ್ನು ಮಾಡಿ ಗಾಂಧೀಜಿಯ ಕನಸುಗಳನ್ನು ನನಸು ಮಾಡಲು ಬಿಜೆಪಿ ಪಕ್ಷ ಪಾದಯಾತ್ರೆ ಶುರು ಮಾಡಿದೆ.

ಎಸ್. ಮುನಿಸ್ವಾಮಿ

ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವ್ಯಾಪ್ತಿಯ ಕೈವಾರ ಕ್ಷೇತ್ರದಿಂದ ಸಂಸದ ಮುನಿಸ್ವಾಮಿ ಇಂದು ಪಾದಯಾತ್ರೆ ಶುರುಮಾಡಿದ್ದು ಬಿಜೆಪಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಾಥ್ ನೀಡಿದ್ದಾರೆ.

ಕೋಲಾರ ಸಂಸದ ಎಸ್​.ಮುನಿಸ್ವಾಮಿ..

ಕೋಲಾರ ಲೋಕಸಭಾ ವ್ಯಾಪ್ತಿಯ 6 ತಾಲೂಕುಗಳಲ್ಲಿ 100 ಕಿ.ಮೀ.ಗೂ ಅಧಿಕ ಪಾದಯಾತ್ರೆ ಮುಗಿಸಿದ್ದು ಗಾಂಧಿಜೀಯ ಕನಸುಗಳನ್ನು ನನಸು ಮಾಡಲು ಶ್ರಮಿಸುತ್ತಿದ್ದೇವೆ ಎಂದರು. ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ವಚ್ಛಭಾರತ್ ಹಾಗೂ ಪರಿಸರ ರಕ್ಷಣೆಗೆ ಬಿಜೆಪಿ ಪಕ್ಷ ಸಿದ್ದ. ಗಾಂಧೀಜಿ ಕನಸುಗಳನ್ನು ನನಸು ಮಾಡಲು ವರಿಷ್ಠರು ತಿಳಿಸಿರುವುದಾಗಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್ ಮುನಿಸ್ವಾಮಿ ಇಂದು ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ತಿಳಿಸಿದರು.

ಆಫ್ರಿಕನ್ ಕ್ಯಾಟ್ ಫಿಶ್ ನಿಷೇಧಕ್ಕೆ ಸಂಸದರ ಸಾಥ್ : ಚಿಂತಾಮಣಿ ತಾಲೂಕಿನಲ್ಲಿ ಕ್ಯಾಟ್ ಫಿಶ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ, ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತ್ತಿರುವುದು ವಿಪರ್ಯಾಸ. ಅಧಿಕಾರಿಗಳು ಮೀನು ಸಾಕಾಣಿಕೆದಾರರ ಸಭೆ ಕರೆದು ಕಾಟಾಚಾರಕ್ಕೆ ಎಚ್ಚೆರಿಕೆ ನೀಡಿದರೂ ಯಾವುದೇ ಉಪಯೋಗವಾಗಲಿಲ್ಲ. ಈಗಾಗಲೇ ಸಾಕಷ್ಟು ಬಾರಿ ಕ್ಯಾಟ್ ಫಿಶ್ ಸಾಕಾಣಿಕೆಗಾರರ ಮೇಲೆ ಸೂಕ್ತ ಕ್ರಮಗೊಳ್ಳುವಂತೆ ಸಂಸದರು ಎಚ್ಚರಿಸಿದ್ರೂ ಯಾವುದೇ ಉಪಯೋಗವಾಗಿಲ್ಲ. ಆದರೆ, ಅಧಿಕಾರಿಗಳು ಕ್ರಮ ಕೈಗಳ್ಳದಿದ್ದರೆ ನಾನೇ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವೆ ಅಂತಾ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಮಟ್ಟದಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು:ರಾತ್ರಿಯಷ್ಟೇ ಜಿಲ್ಲೆಯ ಚಿಂತಾಮಣಿ ಹಾಗೂ ಗೌರಿಬಿದನೂರು ನಗರಸಭೆ ಚುನಾವಣೆಗಳಿಗೆ ದಿನಾಂಕ ಘೋಷಣೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಭೇಟಿ ಮಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪಕ್ಷದ ಅಭಿವೃದ್ದಿಗೆ ಶ್ರಮವಹಿಸಲಾಗುವುದೆಂದು ತಿಳಿಸಿದರು.

ABOUT THE AUTHOR

...view details