ಕೊಡಗು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಸಾಮೂಹಿಕ ಕಾರ್ಯಕ್ರಮಗಳನ್ನು ನಿಷೇಧಿಸಿದ್ದರೂ, ಪಟ್ಟಣದ ಕಾವೇರಿ ಹಾಲ್ ಹಾಗೂ ಗೌಡ ಸಮಾಜದಲ್ಲಿ ಅದ್ಧೂರಿಯಾಗಿ ಮದುವೆಗಳು ನಡೆಯುತ್ತಿವೆ.
ಸರ್ಕಾರದ ಆದೇಶಕ್ಕಿಲ್ಲವೇ ಬೆಲೆ?: ಮಂಜಿನ ನಗರಿಯಲ್ಲಿ ನಡೆಯಿತು ಅದ್ಧೂರಿ ಮದುವೆ
ಮದುವೆ, ಸಭೆ-ಸಮಾರಂಭಗಳಿಗೆ ಸರ್ಕಾರದ ನಿರ್ಬಂಧವಿದ್ದರೂ ಮಡಿಕೇರಿ ನಗರದಲ್ಲೇ ಎರಡೆರಡು ಮದುವೆಗಳು ಜರುಗುತ್ತಿವೆ. ಕಾವೇರಿ ಹಾಲ್ನಲ್ಲಿ ಸುಮಾರು 1,500 ಜನರು ಹಾಗೂ ಗೌಡ ಸಮಾಜದಲ್ಲಿ 300ಕ್ಕೂ ಹೆಚ್ಚು ಜನರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಂಜಿನ ನಗರಿಯಲ್ಲಿ ನಡೆಯಿತು ಅದ್ಧೂರಿ ಮದುವೆ
ಮದುವೆ, ಸಭೆ-ಸಮಾರಂಭಗಳಿಗೆ ನಿರ್ಬಂಧವಿದ್ದರೂ ಮಡಿಕೇರಿ ನಗರದಲ್ಲೇ ಎರಡೆರಡು ಮದುವೆಗಳು ಜರುಗುತ್ತಿವೆ. ಕಾವೇರಿ ಹಾಲ್ನಲ್ಲಿ ಸುಮಾರು 1,500 ಜನರು ಹಾಗೂ ಗೌಡ ಸಮಾಜದಲ್ಲಿ 300ಕ್ಕೂ ಹೆಚ್ಚು ಜನರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಅದ್ಧೂರಿ ಮದುವೆಗಳಿಗೆ ಸರ್ಕಾರ ಕಡಿವಾಣ ಹಾಕಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.