ಕರ್ನಾಟಕ

karnataka

By

Published : May 13, 2020, 12:19 PM IST

ETV Bharat / state

ಅಧಿಕಾರಿಗಳ ನಿರ್ಲಕ್ಷ್ಯ, ತಮ್ಮ ಜಮೀನುಗಳಿಗೆ ಸ್ವಂತ ದುಡ್ಡಿನಲ್ಲಿ ರಸ್ತೆ ನಿರ್ಮಿಸಿದ ರೈತರು..

ಹಲವು ವರ್ಷಗಳೇ ಕಳೆದರೂ ಅವರ ಆಸೆ ಈಡೇರಲಿಲ್ಲ. ಈಗ ಸುಮಾರು 40 ಜನ ರೈತರು ತಲಾ ಐದು ಸಾವಿರ ಹಣ ಹಾಕಿ, ಸುಮಾರು 1.2 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ.

The farmers built the road in Sedam
ಸ್ವಂತ ದುಡ್ಡಿನಲ್ಲಿಯೆ ರಸ್ತೆ ನಿರ್ಮಿಸಿದ ರೈತರು

ಸೇಡಂ: ಕೃಷಿ ಜಮೀನುಗಳಿಗೂ ರಸ್ತೆ ನಿರ್ಮಿಸುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಆದರೆ, ಅಧಿಕಾರಿಗಳ ನಿಧಾನಗತಿಗೆ ಬೇಸತ್ತ ರೈತರು ಸ್ವಂತ ಹಣದಲ್ಲೇ ರಸ್ತೆ ನಿರ್ಮಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಪಟ್ಟಣದ ಹೆಡ್ಡಳ್ಳಿ ರಸ್ತೆ ಸಮೀಪದ ಜಮೀನುಗಳ ರೈತರು ಹಲವಾರು ದಿನಗಳಿಂದ ತಮ್ಮ ಜಮೀನುಗಳಿಗೆ ತೆರಳಲು ರಸ್ತೆ ನಿರ್ಮಿಸಿ ಕೊಡುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದರು. ಹಲವು ವರ್ಷಗಳೇ ಕಳೆದರೂ ಅವರ ಆಸೆ ಈಡೇರಲಿಲ್ಲ. ಈಗ ಸುಮಾರು 40 ಜನ ರೈತರು ತಲಾ ಐದು ಸಾವಿರ ಹಣ ಹಾಕಿ, ಸುಮಾರು 1.2 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ.

ಇದಕ್ಕೆ ಶಿವಶಂಕರೇಶ್ವರ ಮಠದ ಪೀಠಾಧಿಪತಿ ಶಿವಶಂಕ್ರಯ್ಯ ಮಹಾಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ABOUT THE AUTHOR

...view details