ಕರ್ನಾಟಕ

karnataka

ಬಸ್ ಘಟಕದಲ್ಲಿಯೇ ನೇಣು ಬಿಗಿದುಕೊಂಡ ಸಾರಿಗೆ ಬಸ್​​ ಸಿಬ್ಬಂದಿ!

By

Published : Sep 10, 2022, 3:08 PM IST

ಸಾರಿಗೆ ಬಸ್​​ ಸಿಬ್ಬಂದಿಯೊಬ್ಬರು ಬಸ್ ಘಟಕದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

KSRTC Staff Suicide In Sedam Bus Depot
KSRTC Staff Suicide In Sedam Bus Depot

ಕಲಬುರಗಿ:ಸೇಡಂ ಬಸ್ ಘಟಕದಲ್ಲಿ ಚಾಲಕ ಕಂ. ನಿರ್ವಾಕನೊಬ್ಬ ಮುಖಕ್ಕೆ ಮುಸುಕು ಹಾಕಿಕೊಂಡು ತಂತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಭೀಮಾಶಂಕರ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಜಿಲ್ಲೆಯ ಅಫಜಲಪುರ ತಾಲೂಕಿನ ಗುಡೂರ ಗ್ರಾಮದ ಭೀಮಾಶಂಕರ ಈ ಮುಂಚೆ ಚಿಂಚೋಳಿ ಡಿಪೋದಲ್ಲಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಸೇಡಂ ಘಟಕಕ್ಕೆ ವರ್ಗಾವಣೆಯಾಗಿ ಬಂದಿದ್ದರು.

ಸೇಡಂ ಬಸ್ ಘಟಕದಲ್ಲಿ ಮುಖಕ್ಕೆ ಟವೆಲ್‌ನಿಂದ ಕವರ್ ಮಾಡಿಕೊಂಡು ಕೊರಳಿಗೆ ತಂತಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಭೀಮಾಶಂಕರಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಸಾವಿನ ವಿಷಯ ಕೇಳಿದ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಸ್ಥಳಕ್ಕೆ ಸಿಪಿಐ ಆನಂದರಾವ್, ಪಿಎಸ್ಐ ಸೋಮಲಿಂಗ ಒಡೆಯರ್ ಭೇಟಿ‌ ನೀಡಿ ಪರೀಶಿಲನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವ ಹಸ್ತಾಂತರ ಮಾಡಲಾಗುತ್ತದೆ. ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಗುವಿನ ಕುತ್ತಿಗೆ ಮೇಲೆ ಕಾಲಿಟ್ಟು ಬ್ಯಾಟ್​ನಿಂದ ಥಳಿಸಿದ ಅಜ್ಜಿ! ಕ್ರೌರ್ಯತೆ ಕಂಡು ನೆಟ್ಟಿಗರು ಗರಂ

ABOUT THE AUTHOR

...view details