ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಮೆಕ್ಕೇಜೋಳ ಭಸ್ಮ

ಹಾವೇರಿ, ಆಕಸ್ಮಿಕ ಬೆಂಕಿ ತಗುಲಿ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳ ಸುಟ್ಟು ಕರಕಲಾದ ಘಟನೆ ಹಾನಗಲ್ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಬಳಿ ನಡೆದಿದೆ.

By

Published : Feb 21, 2020, 6:39 AM IST

unexpected-fire-attack-to-corn-in-haveri
ಆಕಸ್ಮಿಕ ಬೆಂಕಿ

ಹಾವೇರಿ : ಆಕಸ್ಮಿಕ ಬೆಂಕಿ ತಗುಲಿ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳ ಸುಟ್ಟು ಕರಕಲಾದ ಘಟನೆ ಹಾನಗಲ್ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುರುವತ್ತೆಪ್ಪನವರ ಎಂಬ ರೈತನಿಗೆ ಸೇರಿದ ಮೆಕ್ಕೆಜೋಳದ ಫಸಲು ಬೆಂಕಿಗೆ ಆಹುತಿಯಾಗಿದೆ. ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಒಕ್ಕಲು ಮಾಡಲು ಹಾಕಿದ್ದ ರಾಶಿಗೆ ಬೆಂಕಿ ತಗುಲಿದೆ.

ಮೆಕ್ಕೇಜೋಳ ಬಣವೆಗೆ ಆಕಸ್ಮಿಕ ಬೆಂಕಿ

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿಯೇ ಮೆಕ್ಕೆಜೋಳ ಸುಟ್ಟು ಭಸ್ಮವಾಗಿದೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details