ಕರ್ನಾಟಕ

karnataka

By

Published : Nov 21, 2020, 3:55 PM IST

ETV Bharat / state

ಹಲ್ಲೆ ಖಂಡಿಸಿ ರಾಣೆಬೆನ್ನೂರು ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

ಹಲ್ಲೆ ಮಾಡಿದ ವ್ಯಕ್ತಿಗೆ ಯಾವೊಬ್ಬ ವಕೀಲರು ಜಾಮೀನು ಆಗಲಿ ಅಥವಾ ಕೇಸು ನಡೆಸುವುದಕ್ಕೆ ಮುಂದಾಗುವುದಿಲ್ಲ. ಅವರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

lawyers-association-ranebennuru
ರಾಣೆಬೆನ್ನೂರು ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

ರಾಣೆಬೆನ್ನೂರು:ವಕೀಲರೊಬ್ಬರ ಮೇಲಿನ ಹಲ್ಲೆ ಖಂಡಿಸಿ ರಾಣೆಬೆನ್ನೂರು ನಗರದಲ್ಲಿ ವಕೀಲರ ಸಂಘದಿಂದ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಣೆಬೆನ್ನೂರು ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

ನಗರದ ಕೋರ್ಟ್ ವೃತ್ತದಲ್ಲಿ ಸೇರಿದ ನೂರಾರು ವಕೀಲರು ಪಿ.ಬಿ. ರಸ್ತೆ ಬಂದ್ ಮಾಡಿ, ಹಲ್ಲೆ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ರಾಣೆಬೆನ್ನೂರಿನ ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ ಲಮಾಣಿ ಎಂಬ ವಕೀಲರು ನಿನ್ನೆ ಬ್ಯಾಂಕ್​ಗೆ ನಿರ್ಬಂಧಿತ ಆಜ್ಞೆ ನೀಡಲು ಹೋಗಿದ್ದರಂತೆ.

ರಾಣೆಬೆನ್ನೂರು ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

ಈ ಸಮಯದಲ್ಲಿ ಬಸಲಿಕಟ್ಟಿ ತಾಂಡದ ಉಮೇಶ ಲಮಾಣಿ ಎಂಬ ವ್ಯಕ್ತಿ, ಬ್ಯಾಂಕಿನಿಂದ ಹೊರ ಬಂದ ಸಮಯದಲ್ಲಿ ವಕೀಲನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ವಕೀಲ ಮಂಜುನಾಥ ಲಮಾಣಿಗೆ ತೀವ್ರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ಮಾಡಿದ ವ್ಯಕ್ತಿಗೆ ಯಾವೊಬ್ಬ ವಕೀಲರು ಜಾಮೀನು ಆಗಲಿ ಅಥವಾ ಕೇಸು ನಡೆಸುವುದಕ್ಕೆ ಮುಂದಾಗುವುದಿಲ್ಲ. ಅವರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ರಾಣೆಬೆನ್ನೂರು ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

ABOUT THE AUTHOR

...view details