ಕರ್ನಾಟಕ

karnataka

ETV Bharat / state

ಮರಳಿನ ಗುಂಡಿಯಲ್ಲಿ ಬಿದ್ದು ಕುರಿಗಾಹಿ ಸಾವು

ನೀರು ಕುಡಿಯಲು ತೆರಳಿದ್ದ ವೇಳೆ ನದಿ ತೀರದಲ್ಲಿ ಗುಂಡಿಯೊಳಗೆ ಬಿದ್ದು ಕುರಿಗಾಹಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

By

Published : May 15, 2019, 8:25 PM IST

ಮರಳಿನ ಗುಂಡಿಯಲ್ಲಿ ಬಿದ್ದು ಕುರಿಗಾಹಿ ಸಾವು

ಹಾವೇರಿ:ನೀರು ಕುಡಿಯಲು ತೆರಳಿದ್ದ ವೇಳೆ ನದಿ ತೀರದಲ್ಲಿ ಗುಂಡಿಯೊಳಗೆ ಬಿದ್ದು ಕುರಿಗಾಹಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ನೀರು ಕುಡಿಯಲು ಹೋದ ವೇಳೆ ಮರಳು ಗಣಿಗಾರಿಕೆ ವೇಳೆ ನದಿಯಲ್ಲಿ ನಿರ್ಮಾಣವಾಗಿದ್ದ ಗುಂಡಿಗೆ ಬಿದ್ದು 19 ವರ್ಷ ವಯಸ್ಸಿನ ವೀರೇಶ ಮುಗ್ಗದ ಎಂಬ ಯುವಕ ಮೃತಪಟ್ಟಿದ್ದಾನೆ.

ಮರಳಿನ ಗುಂಡಿಯಲ್ಲಿ ಬಿದ್ದು ಕುರಿಗಾಹಿ ಸಾವು

ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details