ಕರ್ನಾಟಕ

karnataka

ಹೆಚ್​​ಡಿಕೆ-ಬಿಜೆಪಿ ಚೆನ್ನಾಗ್ ಇರೋದ್ರಿಂದ ಬೈ ಎಲೆಕ್ಷನ್​ನಲ್ಲಿ ಬಿಜೆಪಿ ಗೆದ್ದಿದ್ದು: ಸಿದ್ದರಾಮಯ್ಯ

ಜೆಡಿಎಸ್​ ನಾಯಕ ಹೆಚ್​ ಡಿ ಕುಮಾರಸ್ವಾಮಿ ಮೊದಲಿಂದಲೂ ಬಿಜೆಪಿ ಜೊತೆ ಚೆನ್ನಾಗಿದ್ದಾರೆ. ಹಾಗಾಗಿಯೇ ಶಿರಾ ಮತ್ತು ಆರ್.ಆರ್. ನಗರದಲ್ಲಿ ಜೆಡಿಎಸ್​ನ ವೋಟು ಬಿಜೆಪಿಗೆ ಹೋಗಿದ್ದು, ಇಲ್ಲದಿದ್ರೆ ಬಿಜೆಪಿ ಗೆಲ್ಲೋಕೆ ಆಗ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

By

Published : Nov 25, 2020, 7:50 AM IST

Published : Nov 25, 2020, 7:50 AM IST

siddaramaiah said kumarswamy  is good with bjp
ಸಿದ್ದರಾಮಯ್ಯ ಹೇಳಿಕೆ

ಹಾಸನ:ಕುಮಾರಸ್ವಾಮಿ ಮೊದಲಿಂದಲೂ ಬಿಜೆಪಿ ಜೊತೆ ಚೆನ್ನಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸಂಬಂಧ ಗಟ್ಟಿಯಾಗಿರುವುದರಿಂದ ಶಿರಾ ಮತ್ತು ಆರ್. ಆರ್. ನಗರದಲ್ಲಿ ಜೆಡಿಎಸ್​ನ ವೋಟು ಬಿಜೆಪಿಗೆ ಹೋಗಿದ್ದು, ಇಲ್ಲ ಅಂದಿದ್ದರೆ ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಚ್​​ಡಿಕೆ ಕಾಲೆಳೆದಿದ್ದಾರೆ.

ಕುಮಾರಸ್ವಾಮಿ-ಬಿಜೆಪಿ ಸಂಬಂಧ ಕುರಿತು ಸಿದ್ದರಾಮಯ್ಯ ಮಾತು
ಅರಸೀಕೆರೆ ತಾಲೂಕಿನ ಗಂಡಸಿ ಬಳಿಯ ಮಂಗಳಾಪುರದಲ್ಲಿ ತಮ್ಮ ಸ್ನೇಹಿತನ ಕುಟುಂಬದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಉಪಚುನಾವಣೆಯಲ್ಲಿ ಒಳಒಪ್ಪಂದ ಆಗಿತ್ತೋ ಏನೋ ನನಗೆ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಮಾತ್ರ ಬಿಜೆಪಿ ಜೊತೆ ಚೆನ್ನಾಗಿದ್ದಾರೆ. ಕಾಂಗ್ರೆಸ್ ನವರು ನೋವು ಕೊಟ್ರು ಅಂತ ಕುಮಾರಸ್ವಾಮಿ ಹೇಳಿದ್ರಲ್ಲಾ, ನಮ್ಮಿಂದ ನೋವಾದವ್ರು ತಾಜ್ ಹೋಟೆಲ್​ನಲ್ಲಿ ಇರ್ತಾರಾ? ಅಮೆರಿಕಕ್ಕೆ ಹೋಗುವಾಗ ಸರ್ಕಾರ ಬೀಳುತ್ತೆ ಅಂತ ಗೊತ್ತಿದ್ರು ಹೋದ್ರು. ಅಮೆರಿಕಕ್ಕೆ ಹೋಗುವ ತನ್ನ ಬಳಿ ಶಾಸಕರನ್ನ ಕೊಂಡುಕೊಳ್ಳುವ ಶಕ್ತಿ ಇತ್ತು ಎಂದು ಗೊತ್ತಿದ್ದರೂ ಬೀಳಲಿ ಅಂತನೆ ಸುಮ್ಮನಿದ್ದೆ ಅಂತ ಅವರೇ ಹೇಳಿಕೆ ಕೊಟ್ಟಿದ್ದರು. ಇದರಿಂದ ಗೊತ್ತಾಗುತ್ತೆ ಬಿಜೆಪಿ ಜೊತೆ ಕುಮಾರಸ್ವಾಮಿ ಬಾಂಧವ್ಯ ಚೆನ್ನಾಗಿದೆ ಅಂತಾ ಎಂದು ಲೇವಡಿ ಮಾಡಿದರು.
ಹೈಕಮಾಂಡ್ ಆದೇಶ ಮಾಡಿದ್ದಕ್ಕೆ ಅವರ ಜೊತೆ ಸರ್ಕಾರ ಮಾಡಿದ್ದು, ಇಲ್ಲದಿದ್ದರೆ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಮಸ್ಕಿ ಚುನಾವಣೆಯಲ್ಲಿ ನಿಂತವರೆಲ್ಲ ಕಾಂಗ್ರೆಸ್ಸಿನಲ್ಲಿ ಇದ್ದವರು ಅಲ್ವೇ?. ಈ ಯಡಿಯೂರಪ್ಪನ ಮಗ ಇದ್ದಾನಲ್ಲ ವಿಜಯೇಂದ್ರ ಹಣ ಖರ್ಚು ಮಾಡೋದ್ರಲ್ಲಿ ಸ್ಟ್ಯಾಟಿಸ್ಟಿಕ್ಸ್ ‌ಮಾಡಿದ್ದಾರೆ. ಹಾಗೆ ಮಾಡಿದ್ರೆ ಉಪಚುನಾವಣೆ ಬಹುತೇಕ ಸರ್ಕಾರದ ಪರವೇ ಗೆಲುವು ಸಾಧಿಸುತ್ತದೆ. ಇದು ಸರ್ವೇ ಸಾಮಾನ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ABOUT THE AUTHOR

...view details