ಕರ್ನಾಟಕ

karnataka

ಹಾಸನ: ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೋಳಿಯಂತೆ ಸುಟ್ಟ ದುಷ್ಕರ್ಮಿಗಳು... ಕಾರಣ!?

By

Published : Jun 13, 2021, 1:26 PM IST

ಅರಸೀಕೆರೆ ತಾಲೂಕಿನ ಮಾಡಾಳು ಚಿಕ್ಕಗೊಂಡನಹಳ್ಳಿ ನಡುವಿನ ಬಾರೆಯ ಜಮೀನೊಂದರಲ್ಲಿ ಅಪರಿಚಿತ ವ್ಯಕ್ತಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಘಟನೆಗೆ ಹಳೇ ದ್ವೇಷ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

Hassan
ಅಪರಿಚಿತ ವ್ಯಕ್ತಿ ಕೊಲೆ ಪ್ರಕರಣ

ಅರಸೀಕೆರೆ/ಹಾಸನ: ಅಪರಿಚಿತ ವ್ಯಕ್ತಿಯನ್ನು ಮಾಂಸದ ತುಂಡುಗಳಂತೆ ಕತ್ತರಿಸಿ ಪೆಟ್ರೋಲ್ ಹಾಕಿ ಸುಟ್ಟಿರುವ ಅಮಾನುಷ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಅರಸೀಕೆರೆ ತಾಲೂಕಿನ ಮಾಡಾಳು ಚಿಕ್ಕಗೊಂಡನಹಳ್ಳಿ ನಡುವಿನ ಬಾರೆಯ ಜಮೀನು ಒಂದರಲ್ಲಿ ಅಪರಿಚಿತ ವ್ಯಕ್ತಿಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಘಟನೆಗೆ ಹಳೇ ದ್ವೇಷ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಶವವನ್ನು ತುಂಡು ತುಂಡಾಗಿ ಕತ್ತರಿಸಿ ಸುಟ್ಟ ದುಷ್ಕರ್ಮಿಗಳು

ಸುಮಾರು 35ರಿಂದ 40 ವರ್ಷ ವಯಸ್ಸಿನ ಗಂಡಸಿನ ಶವ ಎಂದು ಗುರುತಿಸಲಾಗಿದ್ದು, ಈ ಬರ್ಬರ ಕೊಲೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ವ್ಯಕ್ತಿಯನ್ನ ಬೇರೆ ಕಡೆ ಕೊಲೆ ಮಾಡಿ ನಂತರ ಈ ನಿರ್ಜನ ಪ್ರದೇಶದಲ್ಲಿ ಆತನ ಶವವನ್ನು ತಂದು ಮಾಂಸದ ರೀತಿ ಕೈ, ಕಾಲು ಮತ್ತು ತಲೆಯನ್ನು ಕತ್ತರಿಸಿ, ಬಳಿಕ ಕೋಳಿಯನ್ನು ಸುಡುವ ರೀತಿ ಕಟ್ಟಿಗೆಯನ್ನು ಹಾಕಿ ದೇಹವನ್ನು ಸುಟ್ಟು ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದಕ್ಕೆ ಈ ನಿರ್ಜನ ಪ್ರದೇಶದಲ್ಲಿ ಅಲ್ಲಲ್ಲಿ ಕಾಣುವ ರಕ್ತದ ಕಲೆಗಳು ಸಾಕ್ಷಿಯಾಗಿವೆ.

ಇಂತಹ ಕೃತ್ಯ ನಡೆದಿರುವುದು ತಾಲೂಕಿನಲ್ಲಿ ಎರಡನೇ ಬಾರಿ. ಅಕ್ರಮ ಸಂಬಂಧ ಬಯಲಾಯಿತು ಎಂಬ ಕಾರಣಕ್ಕಾಗಿ ಈ ಹಿಂದೆ ಆಲೂಗಡ್ಡೆ ವ್ಯಾಪಾರಿ ಚಂದ್ರೇಗೌಡನ ಕೊಲೆ ಪ್ರಕರಣವನ್ನು ಕೂಡ ಇದೇ ರೀತಿ ಮಾಡಿದ್ದರು. ಈ ಪ್ರಕರಣ ಕೂಡ ಒಂದು ಹೆಣ್ಣಿಗಾಗಿ ನಡೆದಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಕ್ಕೆ ಜಾವಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹದ ಕೆಲವು ಆಯ್ದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ದುಷ್ಕರ್ಮಿಗಳ ಪತ್ತೆಗಾಗಿ ಹಾಸನ ಪೊಲೀಸರು 3 ವಿಶೇಷ ತಂಡವನ್ನು ರಚನೆ ಮಾಡಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ.

ಓದಿ:ಕತ್ತು ಸೀಳಿ ಹಸುಳೆಯ ಕೊಲೆ; ಚಿಕ್ಕಪ್ಪನಿಂದಲೇ ಹೇಯಕೃತ್ಯ !

ABOUT THE AUTHOR

...view details