ಕರ್ನಾಟಕ

karnataka

By

Published : Sep 24, 2020, 4:43 PM IST

Updated : Sep 24, 2020, 5:17 PM IST

ETV Bharat / state

ಎರಡು ಪ್ರತ್ಯೇಕ ಘಟನೆಯಲ್ಲಿ ಚಿರತೆ ದಾಳಿಗೆ ಮೂರು ಆಡು, ಒಂದು ಕುರಿ ಬಲಿ

ಎರಡು ಪ್ರತ್ಯೇಕ ಪ್ರಕರಣದಲ್ಲಿ 3 ಆಡು ಹಾಗೂ ಒಂದು ಕುರಿ ಚಿರತೆ ದಾಳಿಗೆ ಬಲಿಯಾಗಿದೆ. ಹಾಸನದ ಅರಕಲಗೂಡಿನಲ್ಲಿ 3 ಆಡುಗಳು ದಾಳಿಗೆ ಬಲಿಯಾದರೆ ಇನ್ನೊಂದೆಡೆ ಮೈಸೂರಿನ ನಂಜಾಪುರದಲ್ಲಿ ಕೊಟ್ಟಿಗೆಯಲ್ಲಿದ್ದ ಒಂದು ಕುರಿ ಚಿರತೆಗೆ ಆಹಾರವಾಗಿದೆ.

In two  incidents, three goats and one sheep are killed by the leopard
ಎರಡು ಪ್ರತ್ಯೇಕ ಘಟನೆಯಲ್ಲಿ ಮೂರು ಆಡು, ಒಂದು ಕುರಿ ಚಿರತೆ ದಾಳಿಗೆ ಬಲಿ

ಹಾಸನ/ಮೈಸೂರು: ಹಾಸನ ಜಿಲ್ಲೆಯ ಅರಕಲಗೂಡು ದೊಡ್ಡಮಗ್ಗೆ ಹೋಬಳಿ ಕಣಿಯಾರು ಗ್ರಾಮದ ಶ್ರೀ ಪುಟ್ಟಶೆಟ್ಟಿ ಮತ್ತು ಚಾಮಶೆಟ್ಟಿಗೆ ಸೇರಿದ 3 ಆಡುಗಳನ್ನು ರಾತ್ರಿ ವೇಳೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

ಈ ಹಿನ್ನೆಲೆ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದ್ದು, ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಇನ್ನು ಘಟನೆ ನಡೆಸ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಕಾವ್ಯಶ್ರೀ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಸ್ಥಳಿಯರೊಂದಿಗೆ ಚರ್ಚೆ ನಡೆಸಿದರು.

ಅಲ್ಲದೆ ಗ್ರಾಮದಲ್ಲಿ ಚಿರತೆ ಹಿಡಿಯಲು ಬೋನ್​​​ಗಳನ್ನು ಇಡಲಾಗಿದೆ ಎಂದಿದ್ದಾರೆ. ಅಲ್ಲದೆ ಸಂಜೆಯ ವೇಳೆ ದನ-ಕರುಗಳನ್ನು ಹೊರಗೆ ಬಿಡಬೇಡಿ, ಮನೆಯಿಂದ ಕತ್ತಲಾದ ಮೇಲೆ ಹೊರಗೆ ಓಡಾಡಬೇಡಿ ಎಂದು ಸ್ಥಳಿಯರಲ್ಲಿ ಮನವಿ ಮಾಡಿದ್ದಾರೆ.

ಎರಡು ಪ್ರತ್ಯೇಕ ಘಟನೆಯಲ್ಲಿ ಚಿರತೆ ದಾಳಿಗೆ ಮೂರು ಆಡು, ಒಂದು ಕುರಿ ಬಲಿ

ಇನ್ನೊಂದೆಡೆ ಮೈಸೂರಿನ ನಂಜಾಪುರ ಗ್ರಾಮದಲ್ಲಿ ವರದರಾಜು ಅವರಿಗೆ ಸೇರಿದ್ದ ಕುರಿ ಚಿರತೆ ದಾಳಿಗೆ ಬಲಿಯಾಗಿದೆ. ಕೊಟ್ಟಿಯಲ್ಲಿ ಕಟ್ಟಿದ್ದ ವೇಳೆ ಚಿರತೆ ದಾಳಿ ನಡೆಸಿದ್ದು, ಒಂದು ತಿಂಗಳ ಅಂತರದಲ್ಲಿ 2 ಕುರಿಗಳು ಚಿರತೆಗೆ ಆಹಾರವಾಗಿವೆ.

ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ಚಿರತೆ ದಾಳಿ ನಡೆಸುತ್ತಿದ್ದು ಸ್ಥಳಿಯರಲ್ಲಿ ಆತಂಕ ಮನೆಮಾಡಿದೆ.

Last Updated : Sep 24, 2020, 5:17 PM IST

ABOUT THE AUTHOR

...view details