ಕರ್ನಾಟಕ

karnataka

ಪ್ರತಾಪ್ ಸಿಂಹ ಕಸಾಯಿಖಾನೆಗೆ ಬೆಂಬಲ ನೀಡಿರುವುದು ನನಗೆ ಗೊತ್ತಿಲ್ಲ: ಸಚಿವ ಪ್ರಭು ಚೌವ್ಹಾಣ್

By

Published : Jan 30, 2021, 7:32 PM IST

ಪ್ರತಾಪ್ ಸಿಂಹ ಕಸಾಯಿಖಾನೆ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಒಂದು ವೇಳೆ ಅದು ನಿಜವಾದ್ರೆ ನಾನು ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹ್ಹಾಣ್​ ತಿಳಿಸಿದರು.

i-dont-know-if-pratap-simha-supported-the-slaughterhouse
ಸಚಿವ ಪ್ರಭು ಚೌವ್ಹಾಣ್

ಹಾಸನ: ಸಂಸದ ಪ್ರತಾಪ್ ಸಿಂಹ ಕಸಾಯಿಖಾನೆ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಹಾಗೇನಾದ್ರು ಇದ್ರೆ ನಾನೇ ಖುದ್ದು ನಿಂತು ಅದನ್ನು ಬಂದ್ ಮಾಡಿಸುತ್ತೇನೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹ್ಹಾಣ್​ ಹೇಳಿದರು.

ಪ್ರತಾಪ್ ಸಿಂಹ ಕಸಾಯಿಖಾನೆಗೆ ಬೆಂಬಲ ನೀಡಿರುವುದು ನನಗೆ ಗೊತ್ತಿಲ್ಲ

ನಗರದಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಮೇಲೆ ಕಸಾಯಿಖಾನೆ ತೆರೆಯುವ ಮಾತಿಲ್ಲ. ಸಂಸದರ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಬಂದರೆ ತನಿಖೆ ನಡೆಸುತ್ತೇನೆ ಎಂದರು.

ಓದಿ-ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆದ ವಿದ್ಯಾರ್ಥಿನಿ!

ಸಂತೆಯಲ್ಲಿ ಮಾರಾಟವಾಗದ ಜೆರ್ಸಿ ಹೆಚ್​​ ತಳಿಯ ಕರುಗಳನ್ನು ಚನ್ನರಾಯಪಟ್ಟಣ ಸೇರಿದಂತೆ ಜಿಲ್ಲೆಯ ಹಲವು ಕಡೆ ತಾಲೂಕು ಕಚೇರಿಯಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ ಎಂಬ ಮಾತಿಗೆ, ನಾನು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಮಾರಾಟವಾಗದೆ ಬಿಟ್ಟು ಹೋಗುವ ಕರುಗಳನ್ನು ಗೋ ಶಾಲೆಗೆ ಬಿಡುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

ಗೋಹತ್ಯೆ ಮತ್ತು ಸಾಗಾಣೆ ವಿರುದ್ಧ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಮತ್ತಷ್ಟು ಗೋವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಅಮೃತ ಮಹಲ್ ಕಾವಲಿನ ಹಳ್ಳಿಕಾರ್ ತಳಿಯ ಪ್ರಕರಣಕ್ಕೆ ಸಂಬಂಧಪಟ್ಟತೆ ಮಾತನಾಡಿದ ಅವರು, ಈಗಾಗಲೇ ನಾನು ಹಿಂದೆ ಭೇಟಿ ನೀಡಿ ಮೂಲ ಸೌಕರ್ಯ ಒದಗಿಸಬೇಕೆಂದು ಸೂಚನೆ ನೀಡಿದ್ದೆ. ಕೊವೀಡ್ ಹಿನ್ನೆಲೆ ಸ್ವಲ್ಪ ತಡವಾಗಿದೆ. ಮತ್ತೊಮ್ಮೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.

ABOUT THE AUTHOR

...view details