ಕರ್ನಾಟಕ

karnataka

By

Published : Jun 13, 2019, 9:53 AM IST

ETV Bharat / state

ಹೆಸರಿಗಷ್ಟೇ ಪ್ಲಾಸ್ಟಿಕ್​ ನಿಷೇಧ... ಎಗ್ಗಿಲ್ಲದೇ ಸಾಗಿದೆ ಬಳಕೆ... ಹೆಚ್ಚುತ್ತಿದೆ ತ್ಯಾಜ್ಯ

ನಗರದ ಸುತ್ತಮುತ್ತ ಕಸದ ರಾಶಿಗಳು ಎದ್ದುಕಾಣುತ್ತಿವೆ. ಸಾರ್ವಜನಿಕರು ರಸ್ತೆಯ ಬದಿಯಲ್ಲಿ, ಪ್ರಮುಖ ಸ್ಥಳದಲ್ಲಿ ಮನೆಯ ಹಾಗೂ ಹೋಟೆಲ್ ತ್ಯಾಜ್ಯ ಬಿಸಾಡುತ್ತಿರುವುದರಿಂದ ನಿತ್ಯ ಟನ್ ಗಟ್ಟಲೇ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಪ್ಲಾಸ್ಟಿಕ್ ನೀಷೆದದ ನಡುವೆಯೂ ಹಾಸನದಲ್ಲಿ ಬಳಕೆ

ಹಾಸನ :ಪ್ಲಾಸ್ಟಿಕ್ ಬ್ಯಾನ್ ಮಾಡಿದ್ರೂ ಕೂಡ ಮಾರಾಟ ಮಾತ್ರ ಹಾಸನ ನಗರದಲ್ಲಿ ನಿಂತಿಲ್ಲ. ಇದರಿಂದ ನಿತ್ಯ ತ್ಯಾಜ್ಯ ಹೆಚ್ಚಾಗುತ್ತಿದ್ದು, ನಗರದ ಸಂತೆಪೇಟೆ ಬಿಳಿ ರಾಶಿ ರಾಶಿ ಕಸ ಸಂಗ್ರಹವಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ.

ನಗರದ ಸುತ್ತಮುತ್ತ ಕಸದ ರಾಶಿಗಳು ಎದ್ದುಕಾಣುತ್ತಿವೆ. ಸಾರ್ವಜನಿಕರು ರಸ್ತೆ ಬದಿಯಲ್ಲಿ, ಪ್ರಮುಖ ಸ್ಥಳದಲ್ಲಿ ಮನೆ ಹಾಗೂ ಹೋಟೆಲ್​ ತ್ಯಾಜ್ಯ ಬಿಸಾಡುತ್ತಿರುವುದರಿಂದ ನಿತ್ಯ ಟನ್ ಗಟ್ಟಲೇ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ನಗರಸಭೆ ಕೂಡಾ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದರಿಂದ ನಗರವಾಸಿಗಳು ರಾತ್ರಿವೇಳೆ ಮನೆಯ ಸಮೀಪದ ರಸ್ತೆ ಬದಿಯಲ್ಲಿಯೇ ಸುರಿಯುತ್ತಿರುವುದು ನೈರ್ಮಲ್ಯ ಹಾಳು ಮಾಡುತ್ತಿದೆ.

ಇದರಿಂದ ರಸ್ತೆಗಳಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗ್ತಿದೆ. ನಗರದ ಒಳಗೆ ಅಷ್ಟೇನೂ ಕಸದ ಸಮಸ್ಯೆ ಇಲ್ಲದಿದ್ದರೂ ನಗರದ ಹೊರವಲಯದಲ್ಲಿ, ರಸ್ತೆಗಳ ಪಕ್ಕದಲ್ಲಿ, ಕಸದ ಸಮಸ್ಯೆ ತೀವ್ರವಾಗಿದ್ದು, ಜೊತೆಗೆ ಈಗ ಮಳೆಗಾಲ ಕೂಡ ಶುರುವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವವರ ಬಗ್ಗೆ ನಿಗಾವಹಿಸಲು ಪಾಲಿಕೆ ಈಗಾಗಲೇ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಮುಂದಾಗಿದ್ದು, ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸೋಕೆ ನಗರಸಭೆ ಮುಂದಾಗಿದೆ.

ಪ್ಲಾಸ್ಟಿಕ್ ನೀಷೆದದ ನಡುವೆಯೂ ಹಾಸನದಲ್ಲಿ ಬಳಕೆ

ಪ್ಲಾಸ್ಟಿಕ್ ನಿಷೇಧದ ನಡುವೆಯೂ ಬಳಕೆ

ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಮಾಲಿನ್ಯ ಮತ್ತು ಕಸದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಪರಿಸರದಲ್ಲಿ ಕೊಳೆಯದೇ ಹಾಗೆ ಉಳಿಯುವುದರಿಂದ ಅದರಿಂದಾಗುವ ದುಷ್ಪರಿಣಾಮಗಳೇ ಹೆಚ್ಚು. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡಬೇಕೆಂದು ನ್ಯಾಯಾಲಯದ ಆದೇಶವಿದ್ರೂ ನಗರದ ಪ್ರಮುಖ ಅಂಗಡಿಗಳಲ್ಲಿ ಎಗ್ಗಿಲ್ಲದೇ ಪ್ಲಾಸ್ಟಿಕ್ ಮಾರಾಟವಾಗುತ್ತಿದೆ.

ಈ ಬಗ್ಗೆ ಪಾಲಿಕೆ ಆರೋಗ್ಯ ಅಧಿಕಾರಿಗಳನ್ನು ಕೇಳಿದ್ರೆ. ನಾವು ಅಕ್ರಮವಾಗಿ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕ್ರಮಕೈಗೊಂಡಿದ್ದು, ಸುಮಾರು ಐದು ಲಕ್ಷ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದರು.

ನಗರದಲ್ಲಿ ನಿತ್ಯ 62 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಸುಮಾರು 12 ವಾಹನಗಳ ಮೂಲಕ ಕಸ ಸಂಗ್ರಹಣೆ ಮಾಡಿ ಬೇರೆಡೆ ಕಸ ಡಂಪ್ ಮಾಡಲಾಗುತ್ತಿದೆ. ಹಾಸನ ನಗರವನ್ನು ಕಸಮುಕ್ತ ನಗರವನ್ನಾಗಿಸಲು ಹಲವಾರು ಕಾರ್ಯಕ್ರಮಗಳನ್ನು ತಂದಿದ್ದು, ಹಾಸನದ ಜನತೆ ಪಾಲಿಕೆಯ ಜೊತೆ ಕೈ ಜೋಡಿಸಿದ್ರೆ ಕಸಮುಕ್ತ ನಗರವನ್ನಾಗಿ ಮಾಡ್ತೀವಿ ಅಂತಾರೆ ನಗರಸಭೆ ಅಧಿಕಾರಿ ರೂಪಾ ಪಿ. ಶೆಟ್ಟಿ.

ABOUT THE AUTHOR

...view details