ಕರ್ನಾಟಕ

karnataka

By

Published : May 11, 2020, 9:18 PM IST

ETV Bharat / state

ಹೊಸಾಯಲ್ಲಾಪುರದ ಕೊಳಿಕೇರೆ ಕಂಟೇನ್ಮೆಂಟ್​​ ವಲಯಗಳಿಗೆ ಶಾಸಕ ಅಮೃತ ದೇಸಾಯಿ ಭೇಟಿ

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅಧಿಕಾರಿಗಳ ತಂಡದೊಂದಿಗೆ ಹೊಸಾಯಲ್ಲಾಪುರದ ಕೊಳಿಕೇರೆ ಹಾಗೂ ಕಾಮನಕಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Dharwad District
ಹೊಸಾಯಲ್ಲಾಪುರದ ಕೊಳಿಕೇರೆ ಕಂಟೇನ್​ಮೆಂಟ್​ ವಲಯಗಳಿಗೆ ಭೇಟಿ ನೀಡಿದ ಶಾಸಕ ಅಮೃತ ದೇಸಾಯಿ

ಧಾರವಾಡ: ಈಗಾಗಲೇ ಹೊಸಾಯಲ್ಲಾಪುರದ ಕೊಳಿಕೇರೆ ಹಾಗೂ ಕಾಮನಕಟ್ಟಿಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲಾಡಳಿತ ಆ ವಲಯವನ್ನು ಸಂಪೂರ್ಣವಾಗಿ ಸೀಲ್ ​ಡೌನ್​ ಮಾಡಿದೆ. ಇಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೇಟಿ ನೀಡಿ ಪರಿಶೀಲನೆ ನಡೆಸಿರುವ ಶಾಸಕರು, ಜನಜೀವನ ಮತ್ತು ಸೋಂಕು ಹರಡದಂತೆ ತೆಗೆದುಕೊಂಡ ಮುನ್ನೆಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಂಪೂರ್ಣ ವಲಯಕ್ಕೆ ಔಷಧ ಸಿಂಪಡಿಸಲು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ABOUT THE AUTHOR

...view details