ಕರ್ನಾಟಕ

karnataka

By

Published : Nov 13, 2019, 7:36 PM IST

ETV Bharat / state

ದಲಿತರಿಗೆ ಮಂಜೂರಾಗಿದ್ದ ನಿವೇಶನದಲ್ಲಿ ಅಕ್ರಮ ಆರೋಪ: ಪ್ರತಿಭಟನೆ

ಸರ್ಕಾರದಿಂದ ದಲಿತರಿಗೆ ಮಂಜೂರು ಮಾಡಿದ್ದ ನಿವೇಶನ ಹಾಗೂ ಆಶ್ರಯ ಮನೆಗಳನ್ನು ಹಣ ಪಡೆದು ಅಕ್ರಮವಾಗಿ ಬೇರೆಯವರಿಗೆ ನೀಡಲಾಗಿದೆ ಎಂದು ಆರೋಪಿಸಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ಜನರು ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ

ಧಾರವಾಡ:ಸರ್ಕಾರದಿಂದ ದಲಿತರಿಗೆ ಮಂಜೂರು ಮಾಡಿದ್ದ ನಿವೇಶನ ಹಾಗೂ ಆಶ್ರಯ ಮನೆಗಳನ್ನು ಹಣ ಪಡೆದು ಅಕ್ರಮವಾಗಿ ಬೇರೆಯವರಿಗೆ ನೀಡಲಾಗಿದೆ ಎಂದು ಆರೋಪಿಸಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ಜನರು ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ

ಸರ್ಕಾರದಿಂದ ನಿವೇಶನ ರಹಿತ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಮನೆ ಮಂಜೂರಾಗಿದ್ದರೂ ಗ್ರಾಮದ ಶಂಕ್ರಪ್ಪ ಎಂಬ ವ್ಯಕ್ತಿ ಅವುಗಳನ್ನು ನಿಜವಾದ ಫಲಾನುಭವಿಗಳಿಗೆ ನೀಡದೇ ಮಾರಾಟ ಮಾಡಿದ್ದಾನೆ. ಇದರಿಂದಾಗಿ ಹಣವಿದ್ದವರೇ ಸರ್ಕಾರದ ಯೋಜನೆಗಳ ಲಾಭ ಪಡೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ‌ ಕಚೇರಿಯಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ಕೂಡಲೇ ಅಕ್ರಮವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ABOUT THE AUTHOR

...view details