ಕರ್ನಾಟಕ

karnataka

ಗೋಡೆ ಕೊರೆದು ಬ್ಯಾಂಕ್​ ಕಳ್ಳತನಕ್ಕೆ ಯತ್ನ: ಸಿಸಿಟಿವಿಯಲ್ಲಿ ಖದೀಮರ ಕೈಚಳಕ ಸೆರೆ

By

Published : Sep 7, 2021, 1:20 PM IST

ಬ್ಯಾಂಕ್​​​​​ನ ಗೋಡೆ ಕೊರೆದು ಒಳಬಂದ ಕಳ್ಳರು ಹಣ ಕದಿಯಲು ಯತ್ನಿಸಿ ವಿಫಲರಾಗಿದ್ದಾರೆ. ಸೇಫ್ ಲಾಕರ್​ ಒಡೆಯಲು ವಿಫಲರಾಗಿದ್ದು, ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

CCTV Captures to thieves who came to rob bank
ಗೋಡೆ ಕೊರೆದು ಬ್ಯಾಂಕ್​ ಕಳ್ಳತನ ಯತ್ನ

ಕಲಘಟಗಿ (ಹುಬ್ಬಳ್ಳಿ):ಕೆವಿಜಿಬ್ಯಾಂಕ್ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ. ಕ್ಯಾಶ್ ಕ್ಯಾಬಿನ್ ಹತ್ತಿರದ ಗೋಡೆ ಕೊರೆದು ಖದೀಮರು ಕಳ್ಳತನಕ್ಕೆ ಯತ್ನಿಸಿದ್ದಾರೆ.

ಬಳಿಕ ಒಳಬಂದ ಕಳ್ಳರು ಗ್ಯಾಸ್ ಕಟರ್ ಬಳಸಿ ಸೇಫ್ ಲಾಕರ್ ಮುರಿಯಲು ಯತ್ನಿಸಿ, ವಿಫಲರಾಗಿದ್ದಾರೆ. ನಂತರ ಬ್ಯಾಂಕ್​ನಲ್ಲಿ ಅಡ್ಡಾಡಿ ಹಣಕ್ಕಾಗಿ ಹುಡುಕಾಡಿದ್ದಾರೆ. ಏನು ಸಿಗದೆ ಅಲ್ಲಿಂದ ವಾಪಸಾಗಿದ್ದಾರೆ. ಖದೀಮರ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜತೆಗೆ ಸಿಸಿಟಿವಿ ಕಂಡೊಡನೆ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಗೋಡೆ ಕೊರೆದು ಬ್ಯಾಂಕ್​ನಲ್ಲಿ ಕಳ್ಳತನಕ್ಕೆ ಯತ್ನ

ಪ್ರಕರಣ ಸಂಬಂಧ ಬ್ಯಾಂಕ್ ಮ್ಯಾನೇಜರ್ ಶರತ್ ನಾಯಕ್ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.

ಕೆಲ ತಿಂಗಳ ಹಿಂದೆ ಕಲಘಟಗಿಯಲ್ಲಿ ಹಾಡಹಗಲೇ ಮೂರು ಮನೆಗಳಲ್ಲಿ ಕಳ್ಳರು ಚಿನ್ನಾಭರಣ ದೋಚಿದ್ದರು. ಇದೀಗ ಬ್ಯಾಂಕ್​ ಕಳ್ಳತನ ಯತ್ನ ನಡೆದಿರುವುದು ಜನರನ್ನ ಬೆಚ್ಚಿಬೀಳಿಸಿದೆ.

ABOUT THE AUTHOR

...view details