ಕರ್ನಾಟಕ

karnataka

By

Published : May 17, 2019, 1:05 PM IST

ETV Bharat / state

ಕಾಂಗ್ರೆಸ್​ನಿಂದ ನಮ್ಮನ್ನು ದೂರ ಮಾಡಲು ಬಿಜೆಪಿ ಷಡ್ಯಂತ್ರ: ಬಿ.ಸಿ. ಪಾಟೀಲ್​

ಬಿಜೆಪಿಯವರು ಸುಳ್ಳುಗಳನ್ನು ಹೇಳುತ್ತಲೇ ನಮ್ಮ ಸಮುದಾಯದವರನ್ನು ಕಾಂಗ್ರೆಸ್​ನಿಂದ ದೂರವಿಡುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹಿರೇಕೇರೂರು ಶಾಸಕ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದರು.

ಬಿ.ಸಿ.ಪಾಟೀಲ್

ಹುಬ್ಬಳ್ಳಿ: ಬಿಜೆಪಿ ನಾಯಕರು ಬರೀ ಸುಳ್ಳುಗಳನ್ನು ಹೇಳುತ್ತಾರೆ ಎಂದು ಹಿರೇಕೇರೂರು ಶಾಸಕ ಬಿ.ಸಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ಗೆ ತಮ್ಮ ಸಮುದಾಯವದವರು ವೋಟ್​ ಹಾಕಿ ಅಪರಾಧ ಮಾಡಲ್ಲ ಎಂದಿದ್ದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಹೇಳಿಕೆಗೆ ಬಿ ಸಿ ಪಾಟೀಲ್​ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷದಿಂದ ನಮ್ಮ ಸಮುದಾಯದ 16 ಶಾಸಕರು ಆಯ್ಕೆಯಾಗಿದ್ದೇವೆ. ನಾವೆಲ್ಲರೂ ಅಪ್ಪಟ ಬಸವಣ್ಣನ ಅನುಯಾಯಿಗಳು ಎಂದು ಹೇಳಿದರು.

ಕಾಂಗ್ರೆಸ್​ನಿಂದ ನಮ್ಮನ್ನು ದೂರ ಮಾಡಲು ಬಿಜೆಪಿ ಷಡ್ಯಂತ್ರ: ಬಿ.ಸಿ. ಪಾಟೀಲ್​

ಸಂಪುಟ ವಿಸ್ತರಣೆ :

ಲೋಕಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ. ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ಭರವಸೆ ಇದೆ ಎಂದು ಶಾಸಕ ಪಾಟೀಲ್​ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಅತೃಪ್ತಿ ಹೊಂದಿದ್ದೆ. ಆದರೆ ಸಿದ್ದರಾಮಯ್ಯ ಅವರು ಸಚಿವ ಸ್ಥಾನದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details