ಕರ್ನಾಟಕ

karnataka

By

Published : Sep 3, 2020, 1:50 PM IST

Updated : Sep 3, 2020, 2:49 PM IST

ETV Bharat / state

ಧಾರವಾಡ: ಕೊರೊನಾ ಗೆದ್ದ ಪೊಲೀಸ್ ಸಿಬ್ಬಂದಿಗೆ ಎಸಿಪಿ ನೇತೃತ್ವದಲ್ಲಿ ಸನ್ಮಾನ

ಕೊರೊನಾ ಸೋಂಕಿಗೆ ಒಳಗಾಗಿ ಬಳಿಕ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿರುವ ಪೊಲೀಸ್ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಇಲ್ಲಿನ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಎಸಿಪಿ ಅನುಷಾ ನೇತೃತ್ವದಲ್ಲಿ ಗೌರವ ಸೂಚಿಸಲಾಯಿತು.

ACP Honored police personnels who recovered from corona
ಕೊರೊನಾ ಗೆದ್ದ ಪೊಲೀಸ್ ಸಿಬ್ಬಂದಿಗೆ ಎಸಿಪಿ ನೇತೃತ್ವದಲ್ಲಿ ಸನ್ಮಾನ

ಧಾರವಾಡ: ಶಹರ ಪೊಲೀಸ್ ಠಾಣೆಯಲ್ಲಿ ಕೊರೊನಾ ಗೆದ್ದ ವಾರಿಯರ್ಸ್​​​ಗೆ ಎಸಿಪಿ ಅನುಷಾ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು. ಕೊರೊನಾ ಹೋರಾಟದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ ಕೊರೊನಾ ಫ್ರಂಟ್ ​​​ಲೈನ್ ವಾರಿಯರ್ಸ್​ ಆದ ಪೊಲೀಸ್ ಸಿಬ್ಬಂದಿ ಕೊರೊನಾಗೆ ಒಳಗಾಗಿ ಬಳಿಕ ಜಯಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೊರೊನಾ ಗೆದ್ದ ಪೊಲೀಸ್ ಸಿಬ್ಬಂದಿಗೆ ಎಸಿಪಿ ನೇತೃತ್ವದಲ್ಲಿ ಸನ್ಮಾನ

ಎ.ಆರ್.ಕುಲಕರ್ಣಿ, ಬಿ.ಹೆಚ್.ಶಿಂಗಣ್ಣವರ್, ಎಂ.ಎಸ್.ಶಿರಗೇರಿ, ಸಿ.ಡಿ.ಬೆಳ್ಳಕ್ಕಿ, ಪಿ.ಪಿ.ಮಾಳಗಿ, ಆರ್.ಸಿ.ಮುದಕನಗೌಡರ್, ಡಿ.ಎ.ಜಾಧವ್ ಕೋವಿಡ್ ಜಯಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಲು ಎಸಿಪಿ ಅನುಷಾ ಮತ್ತು ಸಿಪಿಐ ಶ್ರೀಧರ್ ಸತಾರೆ ನೇತೃತ್ವದಲ್ಲಿ ಹೂಮಳೆ ಸುರಿಸಿ ಸನ್ಮಾನಿಸಲಾಯಿತು.

Last Updated : Sep 3, 2020, 2:49 PM IST

ABOUT THE AUTHOR

...view details