ಕರ್ನಾಟಕ

karnataka

By

Published : Nov 16, 2019, 10:08 AM IST

ETV Bharat / state

ದಾವಣಗೆರೆಯಲ್ಲಿ 'ವನಿತಾ ಸಾಹಿತ್ಯ ಸಿರಿ' ಸಂಚಿಕೆ ಬಿಡುಗಡೆ ಸಮಾರಂಭ

ಕುವೆಂಪು ಕನ್ನಡ ಭವನದಲ್ಲಿ ಇಂದು ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ರಜತ ಮಹೋತ್ಸವ ಹಿನ್ನೆಲೆ 'ವನಿತಾ ಸಾಹಿತ್ಯ ಸಿರಿ' ಸಂಚಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ವನಿತಾ ಸಾಹಿತ್ಯ ಸಿರಿ ಸಂಚಿಕೆ ಬಿಡುಗಡೆ ಸಮಾರಂಭ : ದಾವಣಗೆರೆ

ದಾವಣಗೆರೆ :ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ರಜತ ಮಹೋತ್ಸವ ಹಿನ್ನಲೆಯಲ್ಲಿ 'ವನಿತಾ ಸಾಹಿತ್ಯ ಸಿರಿ' ಸಂಚಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ದಾವಣಗೆರೆಯಲ್ಲಿ ವನಿತಾ ಸಾಹಿತ್ಯ ಸಿರಿ ಸಂಚಿಕೆ ಬಿಡುಗಡೆ ಸಮಾರಂಭ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್, ನಮ್ಮ ವೇದಿಕೆ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವ, ರಜತ ಮಹೋತ್ಸವ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆ ಗೌರವಾಧ್ಯಕ್ಷೆ ಡಾ. ನಾಗಮ್ಮ ಸಿ.ಕೇಶವಮೂರ್ತಿ ವಹಿಸಲಿದ್ದು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಸ್.ವಿ. ಚಂದ್ರಕಲಾ ಅವರು 'ವನಿತಾ ಸಾಹಿತ್ಯ ಸಿರಿ' ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಧ್ಯಾ ಸುರೇಶ್​ ಅವರ 'ಶಾಲ್ಮಲ' ಕವನ ಸಂಕಲನ, ಸತ್ಯಭಾಮ ಮಂಜುನಾಥ್​ರವರ 'ಅಂತಸತ್ವ' ಕವನ ಸಂಕಲನ, ಆರ್.ಆರ್ ಇನಾಂದರ್​ರವರ 'ನಾ ಕಂಡ ಕನಸು' ಕವನ ಸಂಕಲನ, ಗಂಗಾಧರ್​ ಬಿಲ್‌ ನಿಟ್ಟೂರುರವರ 'ಬದುಕಿನ ಬಯಲು' ಕವನ ಸಂಕಲನ ಕೃತಿಗಳು ಈ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿವೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಮಾಜಿ ಉಪಕುಲಪತಿ ಡಾ.ಕೆ. ಮಲ್ಲಿಕಾ ಘಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ನಿಜಲಿಂಗಪ್ಪ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.

ABOUT THE AUTHOR

...view details