ಕರ್ನಾಟಕ

karnataka

ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಸಂಜೆ 6 ಗಂಟೆವರೆಗೂ ದಾವಣಗೆರೆಯಲ್ಲಿ ನಿಷೇಧಾಜ್ಞೆ.. ಮೊಬೈಲ್ ಬ್ಯಾನ್‌..

By

Published : Feb 12, 2022, 5:31 PM IST

ಜಿಲ್ಲೆಯಲ್ಲಿ ಫೆ.14 ರಿಂದ ಫೆ.15ರ ಬೆಳಗ್ಗೆವರೆಗೆ 144 ಸೆಕ್ಷನ್​ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ಶಾಲೆ-ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಹೇರಿದ್ದಾರೆ ಜಿಲ್ಲಾಧಿಕಾರಿಗಳು..

DC Mahantesh Enforced 144 section in Davanagere District
ದಾವಣಗೆರೆ ಜಿಲ್ಲೆಯ್ಲಲಿ 144 ಸೆಕ್ಷನ್​​ ನಿಷೇಧಾಜ್ಞೆ ಜಾರಿ

ದಾವಣಗೆರೆ :ಹಿಜಾಬ್-ಕೇಸರಿ ಸಂಘರ್ಷ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಅನ್ವಯ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮಂಗಳವಾರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ‌ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲ, ಶಾಲೆ-ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಹೇರಿದರು.

ದಾವಣಗೆರೆ ಜಿಲ್ಲೆಯ್ಲಲಿ ನಿಷೇಧಾಜ್ಞೆ ರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರೋದು..

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಶಾಲಾ-ಕಾಲೇಜು ಮುಖ್ಯಸ್ಥರ ಸಭೆಯ ಬಳಿಕ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಸೋಮವಾರ ಒಂಬತ್ತು ಮತ್ತು ಹತ್ತನೇ ತರಗತಿ ಮಾತ್ರ ಆರಂಭಿಸಲಾಗುವುದು. ಮುಂದಿನ ತರಗತಿಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ. ಸದ್ಯ ಹೈಕೋರ್ಟ್ ಮಧ್ಯಂತರ ಆದೇಶದ ಪಾಲನೆ ಜೊತೆಗೆ ಶಾಲೆಗಳನ್ನ ಆರಂಭ ಮಾಡಲಾಗುವುದು‌ ಎಂದರು.

ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪಾಲಕರ ಸಭೆ :ನಾಳೆ ಸಂಜೆಯೊಳಗೆ ಎಲ್ಲಾ ಶಿಕ್ಷಣ ಸಂಸ್ಥೆಯವರು ಕಡ್ಡಾಯವಾಗಿ ಪಾಲಕರ ಸಭೆ ಮಾಡಬೇಕು. ಶಾಲಾ-ಕಾಲೇಜುಗಳಲ್ಲಿ ಯಾವುದೇ ಅಹಿತರಕ ಘಟನೆ ನಡೆದರೆ 112 ಪೊಲೀಸ್ ಕಂಟ್ರೋಲ್‌ ರೂಮ್‌ಗೆ ಫೋನ್ ಮಾಡಬೇಕು. ಸಭೆಯ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿವರ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಇದನ್ನೂ ಓದಿ: ಹಿಜಾಬ್-ಕೇಸರಿ ಸಂಘರ್ಷದ ಮಧ್ಯೆಯೇ ರಾಜ್ಯದಲ್ಲಿ ಉರ್ದು ಯೂನಿವರ್ಸಿಟಿಗೆ ಬೇಡಿಕೆ ಇಟ್ಟ ಎಸ್‌ಡಿಪಿಐ

ABOUT THE AUTHOR

...view details