ಕರ್ನಾಟಕ

karnataka

ಇಂದು ದಾವಣಗೆರೆ ಜಿಲ್ಲೆಯಲ್ಲಿ 323 ಕೊರೊನಾ ಸೋಂಕು ದೃಢ: ಮೂವರು ಸಾವು

By

Published : Aug 13, 2020, 11:14 PM IST

ಬೆಣ್ಣೆ ನಗರಿ ದಾವಣಗೆರೆಯಲ್ಲಿ323 ಜನರಿಗೆ ಇಂದು ಕೊರೊನಾ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

corona positive cases today
ದಾವಣಗೆರೆ ಜಿಲ್ಲೆಯಲ್ಲಿ 323 ಕೊರೊನಾ ಸೋಂಕು ದೃಢ

ದಾವಣಗೆರೆ: ಜಿಲ್ಲೆಯಲ್ಲಿ ಇಂದು 323 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4392ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿಗೆ ಮೂವರು ಬಲಿಯಾಗಿದ್ದು, ಈವರೆಗೆ 114 ಮಂದಿ ಸಾವನ್ನಪ್ಪಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ 323 ಕೊರೊನಾ ಸೋಂಕು ದೃಢ

ಇಲ್ಲಿನ ಜಾಲಿನಗರದ ನಿವಾಸಿ 70 ವರ್ಷದ ವೃದ್ಧ, ಬಿ. ಎಂ.‌ ಲೇಔಟ್ ನ 64 ವರ್ಷದ ವೃದ್ಧ ಹಾಗೂ ಶ್ರೀನಿವಾಸ ನಗರದ 80 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ದಾವಣಗೆರೆ 165, ಹರಿಹರ 64, ಜಗಳೂರು 16, ಚನ್ನಗಿರಿ 34, ಹೊನ್ನಾಳಿ 39, ಹೊರ ಜಿಲ್ಲೆಯಿಂದ ಬಂದಿದ್ದ 5 ಮಂದಿಯಲ್ಲಿ ಸೋಂಕು ಖಚಿತವಾಗಿದೆ‌. 224 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು, ಇದುವರೆಗೂ 2892 ಮಂದಿ ಗುಣಮುಖರಾಗಿದ್ದಾರೆ. 1406 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details