ಕರ್ನಾಟಕ

karnataka

ETV Bharat / state

ದಾವಣಗೆರೆ: ಮರಕ್ಕೆ ಕಾರು ಡಿಕ್ಕಿ, ಇಬ್ಬರು ಯುವಕರ ಸಾವು

ಚನ್ನಗಿರಿ ತಾಲೂಕಿನ ನಲ್ಲೂರು ಬಳಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಇನ್ನೆರು ಯುವಕರು ಮೃತಪಟ್ಟಿದ್ದಾರೆ.

By

Published : Oct 26, 2019, 1:05 PM IST

ಮೃತ ದುರ್ದೈವಿಗಳು

ದಾವಣಗೆರೆ: ಮರದ ಬುಡಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರು ಬಳಿ ನಡೆದಿದೆ.

ಮಧುರನಾಯಕನಹಳ್ಳಿ ಗ್ರಾಮದ ನಿವಾಸಿಗಳಾದ ಸುನೀಲ್(24) ಮತ್ತು ಸುನೀಲ್ ಕುಮಾರ್ ಮೃತರು.

ಮಧುರನಾಯಕನ ಹಳ್ಳಿಯಿಂದ ಚನ್ನಗಿರಿಗೆ ಬರುತ್ತಿರುವಾಗ ಕಾರು ಚಲಾಯಿಸುತ್ತಿದ್ದ ಸುನೀಲ್, ನಿಯಂತ್ರಣ ತಪ್ಪಿ ಮರದ ಬುಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಈ ಸಂಬಂಧ ಚನ್ನಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details