ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ನೀರಿದ್ದ ಬಕೆಟ್​ಗೆ ಬಿದ್ದು ಸಾವನ್ನಪ್ಪಿದ ಒಂಬತ್ತು ತಿಂಗಳ ಹಸುಳೆ

9 ತಿಂಗಳ ಮಗುವೊಂದು ಆಟವಾಡುತ್ತಿದ್ದ ವೇಳೆ ನೀರು ತುಂಬಿದ್ದ ಬಕೆಟ್​ಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಸುರತ್ಕಲ್​ನಲ್ಲಿ ನಡೆದಿದೆ.

By

Published : Jan 1, 2020, 8:11 AM IST

manglore
ಒಂಬತ್ತು ತಿಂಗಳ ಮಗು ಸಾವು

ಮಂಗಳೂರು:ಒಂಬತ್ತು ತಿಂಗಳ ಮಗುವೊಂದು ಆಟವಾಡುತ್ತಿದ್ದ ವೇಳೆ ನೀರು ತುಂಬಿದ್ದ ಬಕೆಟ್​ಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಸುರತ್ಕಲ್​ನಲ್ಲಿ ನಡೆದಿದೆ.

ಸುರತ್ಕಲ್‌ನ ಕಡಂಬೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಯಶ್‌ ಎಂಬ ಪುಟಾಣಿ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿದ್ದ ಬಕೆಟ್​ಗೆ ಕವುಚಿ ಬಿದ್ದಿದೆ. ಪರಿಣಾಮ ಮಗು ಉಸಿರುಗಟ್ಟಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶ ಮೂಲದ ಕುಟುಂಬವೊಂದು ಸುರತ್ಕಲ್ ಕಡಂಬೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ತಾಯಿ ಮನೆಗೆಲಸ ಮುಗಿಸಿ ವಿಶ್ರಾಂತಿ ಪಡೆದುಕೊಳ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details