ಕಡಬ (ದಕ್ಷಿಣ ಕನ್ನಡ) :ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಶಾಲೆಯಲ್ಲಿ ಯುವ ಬ್ರಿಗೇಡ್ ಕಡಬ ತಂಡದಿಂದ ಸ್ವಚ್ಚತೆ ಹಾಗೂ ಶ್ರಮದಾನ ನಡೆಯಿತು. ಈ ಕಾರ್ಯದಲ್ಲಿ ನವದಂಪತಿ ಭಾಗಿಯಾಗುವ ಮೂಲಕ ಗಮನಸೆಳೆದಿದೆ.
ಪೇಟೆ ಸ್ವಚ್ಛತೆ, ಶಾಲಾ ವಠಾರ ಸ್ವಚ್ಛತೆ, ಹುಲ್ಲು ಕತ್ತರಿಸುವುದು ಹಾಗೂ ಶೌಚಾಲಯದ ಗೋಡೆಗೆ ಬಣ್ಣ ಬಳಿಯುವುದು ಸೇರಿದಂತೆ ಯುವ ಬ್ರಿಗೇಡ್ ತಂಡವು ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ಮಾಡುತ್ತಿದೆ. ಆದರೆ, ಈ ವಾರ ವಿಶೇಷ ಎಂದರೆ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ಯುವ ಬ್ರಿಗೇಡ್ ತಂಡದ ಜತೆ ಸೇರಿ ಸ್ವಚ್ಛತಾ ಕಾರ್ಯ ನಡೆಸಿದರು.