ಕರ್ನಾಟಕ

karnataka

ETV Bharat / state

ದುಷ್ಕರ್ಮಿಗಳಿಂದ ಕ್ರೈಸ್ತರಾಜ ದೇಗುಲಕ್ಕೆ ಕಲ್ಲೆಸೆತ,ಗಾಜು ಪುಡಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮನೇಲ ಕ್ರೈಸ್ತರಾಜ ದೇವಾಲಯದ ದೇವರ ಮೂರ್ತಿಯ ಗ್ರೊಟ್ಟೊವನ್ನು ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಡೆದಿದೆ.

By

Published : May 19, 2019, 4:22 PM IST

ಕ್ರೈಸ್ತರಾಜ ದೇವಾಲಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮನೇಲ ಕ್ರೈಸ್ತರಾಜ ದೇವಾಲಯದ ದೇವರ ಮೂರ್ತಿಯ ಗ್ರೊಟ್ಟೊವನ್ನು ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿದ್ದಾರೆ.

ಗ್ರೋಟ್ಟೊದ ಹೊರಗಿನ ಗಾಜು ಪುಡಿಯಾಗಿದ್ದು,ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಟ್ಲ ಪೊಲೀಸ್ ಠಾಣಾಧಿಕಾರಿ ಯಲ್ಲಪ್ಪ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ.

ಗ್ರೊಟ್ಟೊವನ್ನು ಹಾನಿ ಮಾಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೇಗುಲದ ಧರ್ಮಗುರುಗಳು ಆಗ್ರಹಿಸಿದ್ದಾರೆ.

ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details